ಬಂಟ್ವಾಳ

ಬಲ್ಯೊಟ್ಟು ಶ್ರೀಗಳ ಪೀಠಾರೋಹಣ: ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾಗಿ ಬೇಬಿ ಕುಂದರ್ ಆಯ್ಕೆ

ಬಂಟ್ವಾಳನ್ಯೂಸ್ ವರದಿ, www.bantwalnews.com REPORT

ಬಂಟ್ವಾಳ: ಸೋಲೂರು ಮಠ ಆರ್ಯ ಈಡಿಗ ಮಹಾಸಂಸ್ಥಾನದ  ಪೀಠಾರೋಹಣ ಸಮಿತಿಯ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಬೇಬಿ ಕುಂದರ್ ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುವಾರ ನಡೆದ ಹೊಸ್ಮಾರು ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳ ಪೀಠಾರೋಹಣದ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಗೌರವಾಧ್ಯಕ್ಷರಾಗಿ ಸೇಸಪ್ಪ ಕೋಟ್ಯಾನ್ ಪಚ್ವಿನಡ್ಕ, ಎಂ.ತುಂಗಪ್ಪ ಬಂಗೇರಾ, ಕೆ.ಸಂಜೀವ ಪೂಜಾರಿ ಬಿರ್ವ,  ಗೌರವ ಸಲಹೆಗಾರರಾಗಿ ಚೆನ್ನಪ್ಪ ಕೋಟ್ಯಾನ್, ಮಾಯಿಲಪ್ಪ ಸಾಲ್ಯಾನ್, ಯಶವಂತ ದೇರಾಜೆ, ಪ್ರಧಾನ ಕಾರ್ಯದರ್ಶಿಯಾಗಿ ರಂಜೀತ್ ಪೂಜಾರಿ ಬಿ.ಸಿ.ರೋಡು,  ಉಪಾಧ್ಯಕ್ಷರಾಗಿ ಪ್ರೇಮನಾಥ ಕೆ.,  ಅಜೆಕಲ,ಪುರುಷ ಸಾಲ್ಯಾನ್ ನೆತ್ತರಕೆರೆ, ಚಂದ್ರಶೇಖರ ಪೂಜಾರಿ ಬಿ. ಸಿ. ರೋಡು, ಲೋಕೇಶ್ ಸುವರ್ಣ ಅಲೆತ್ತೂರು, ವಿಶ್ವನಾಥ ಬಿ. ಸಿ.ರೋಡ್, ಸಂಜೀವ ಪೂಜಾರಿ ಗುರುಕೃಪ,  ಕಾರ್ಯದರ್ಶಿಗಳಾಗಿ ಹೇಮಂತ್ ಕಾವಳಕಟ್ಟೆ,ಅಶೋಕ್ ಬರಿಮಾರು, ದಿನೇಶ್ ಸುವರ್ಣ ರಾಯಿ,ಸುರೇಶ್ ಪೂಜಾರಿ ಜೋರ,ಜೊತೆ ಕಾರ್ಯದರ್ಶಿಗಳಾಗಿ ರಾಜೇಶ್ ಸುವರ್ಣ ರಾಜಲಕ್ಷ್ಮೀ, ಮೋಹನ್ ರಾಯಿ, ಕೇಶವ ಪೂಜಾರಿ ಅಸಲ್ದೊಡಿ, ಸತೀಶ್ ಪೂಜಾರಿ ಬಾಯಿಲ, ಮಹಿಳಾ ಘಟಕದ ಅಧ್ಯಕ್ಷರಾಗಿ ಶೈಲಜಾ ರಾಜೇಶ್, ಪ್ರಧಾನ ಕಾರ್ಯದರ್ಶಿಯಾಗಿ ಭವಾನಿ ಎನ್.ಅಮೀನ್ ಆಯ್ಕೆಯಾಗಿದ್ದಾರೆ‌.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.