ಬಂಟ್ವಾಳ

ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸಭೆ, ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ:  ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಪದಾಧಿಕಾರಿಗಳ ಸಭೆ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕರವರ ಅಧ್ಯಕ್ಷತೆಯಲ್ಲಿ ಬಂಟ್ವಾಳದ ಎಸ್.ಎಸ್. ಆಡಿಟೋರಿಯಂನಲ್ಲಿ ನಡೆಯಿತು.

ಕ್ಷೇತ್ರ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ ವರದಿ ಮಂಡಿಸಿದರು. ಪದಾಧಿಕಾರಿಗಳ ಸಭೆಗೆ ಚುನಾವಣಾಧಿಕಾರಿಗಳಾಗಿ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಸಹಾಯಕರಾಗಿ ಜಮಾಲ್ ಜೋಕಟ್ಟೆ, ನೂರುಲ್ಲಾ ಕುಳಾಯಿ, ಮತ್ತು ಶರೀಫ್ ಪಾಂಡೇಶ್ವರ,  ಕ್ಷೇತ್ರ ಸಮಿತಿ ಮತ್ತು ನಾಲ್ಕು ಬ್ಲಾಕ್ ಸಮಿತಿಗಳ ಚುನಾವಣೆ ನಡೆಸಿದರು.

ಬಂಟ್ವಾಳ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಎಸ್ ಎಚ್, ಕಾರ್ಯದರ್ಶಿಯಾಗಿ ಮುನೀಶ್ ಆಲಿ, ಉಪಾಧ್ಯಕ್ಷರಾಗಿ ಖಲಂದರ್ ಪರ್ತಿಪಾಡಿ, ಜೊತೆ ಕಾರ್ಯದರ್ಶಿಯಾಗಿ ಮುಬಾರಕ್ ಗೂಡಿನಬಳಿ, ಹಮೀದ್ ಆಲಿ ಕಲ್ಲಡ್ಕ, ಕೋಶಾಧಿಕಾರಿಯಾಗಿ ಫೈಝಲ್ ಮಂಚಿ,ಮತ್ತು ಸಮಿತಿ ಸದಸ್ಯರಾಗಿ ಯೂಸುಫ್ ಆಲಡ್ಕ, ಅಕ್ಬರ್ ಅಲಿ ಪೊನ್ನೋಡಿ, ಇಕ್ಬಾಲ್ ನಂದರಬೆಟ್ಟು, ಮಲಿಕ್ ಕೊಳಕೆ, ಸಲೀಂ ಆಲಾಡಿ, ಅನ್ವರ್ ಬಡಕಬೈಲ್ ಮತ್ತು ಮಜೀದ್ ಆಲಡ್ಕ ಆಯ್ಕೆಯಾದರು. ಬಂಟ್ವಾಳ ಕ್ಷೇತ್ರಕ್ಕೆ ಒಳಪಟ್ಟ ಕೊಳ್ನಾಡು ಬ್ಲಾಕ್ ಅಧ್ಯಕ್ಷರಾಗಿ ಬಶೀರ್ ಕೊಳ್ನಾಡ್, ಕಾರ್ಯದರ್ಶಿಯಾಗಿ ಹೈದರ್ ಆಲಿ ಕಡಂಬು, ಕಲ್ಲಡ್ಕ ಬ್ಲಾಕ್ ಅಧ್ಯಕ್ಷರಾಗಿ ಸತ್ತಾರ್ ಕಲ್ಲಡ್ಕ, ಕಾರ್ಯದರ್ಶಿಯಾಗಿ ಫಾರೂಕ್ ಆಲಾಡಿ, ಸಂಗಬೆಟ್ಟು ಬ್ಲಾಕ್ ಅಧ್ಯಕ್ಷರಾಗಿ ಸುಲೈಮಾನ್ ಉಸ್ತಾದ್, ಕಾರ್ಯದರ್ಶಿಯಾಗಿ ಅಶ್ರಫ್ ಮೂಲರಪಟ್ನ, ಸರಪಾಡಿ ಬ್ಲಾಕ್ ಅಧ್ಯಕ್ಷರಾಗಿ ಬದ್ರುದ್ದೀನ್ ಅಗ್ರಹಾರ ಕಾರ್ಯದರ್ಶಿಯಾಗಿ ಮುಸ್ತಫಾ ಕಾವಲಕಟ್ಟೆ, ಹಾಗು ಬಂಟ್ವಾಳ ಪುರಸಭಾ ಸಮಿತಿಯ ನೂತನ ಅಧ್ಯಕ್ಷರಾಗಿ ಶರೀಫ್ ವಳವೂರು ಮತ್ತು ಕಾರ್ಯದರ್ಶಿಯಾಗಿ ಇಕ್ಬಾಲ್ ಮೈನ್ಸ್ ಆಯ್ಕೆಯಾದರು.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.