ಬಂಟ್ವಾಳ

ಸಜೀಪನಡು ಗ್ರಾಮದ ವಿವಿಧ ಪ್ರದೇಶಗಳಿಗೆ ಶಾಸಕ ಯು.ಟಿ.ಖಾದರ್ ಭೇಟಿ

1 / 6

ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ವಿವಿಧ ಪ್ರದೇಶಗಳಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದರು.

ಸರಕಾರಿ ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಭೆಯಲ್ಲಿ ಪಾಲ್ಗೊಂಡು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಕಾರಣಕರ್ತರಾದ ಅಧ್ಯಾಪಕ ವರ್ಗದವರನ್ನು ಅಭಿನಂದಿಸಿದರು.ಶೇಕಡಾ 100 ಫಲಿತಾಂಶ ಸಾಧಿಸಿದ ಪ್ರಸ್ತುತ ಶಾಲೆಯ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಸಹಕರಿಸಿದ ಊರವರನ್ನು ಶ್ಲಾಘಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚಿಸಿದರು.ಈ ಸಂದರ್ಭ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಮೊಹಮ್ಮದ್ ತುಫೈಲ್ ಅವರನ್ನು ಅಭಿನಂದಿಸಿದರು.

ಜಾಹೀರಾತು

ಬೊಳಮೆ ಮಸೀದಿ ಹಾಗೂ ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನ ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಯನ್ನು ನೀಡಲಾಯಿತು. ಗ್ರಾಮದ ವಿವಿಧ ಪ್ರದೇಶಗಳಾದ ಬೈಲುಗುತ್ತು, ಬಸ್ತಿಗುಡ್ಡೆ,  ಕುಂಟಾಲಗುಡ್ಡೆ ಹಾಗೂ ಗೋಳಿಪಡ್ಪು ಪ್ರದೇಶಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು ಈ ಸಂದರ್ಭ ಸಜೀಪನಡು ವಲಯ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಸಜೀಪ, ಅಬ್ದುಲ್ ರಝಾಕ್ ಕುಕ್ಕಾಜೆ, ಪ್ರವೀಣ್ ಆಳ್ವಾ, ಪಕ್ಷ ಪ್ರಮುಖರಾದ ಎಸ್.ಕೆ. ಮಹಮ್ಮದ್, ಸೋಮನಾಥ್ ಭಂಡಾರಿ, ಇಬ್ರಾಹಿಂ ,ಬಶೀರ್ ಬೋಲಮೆ, ಪಂಚಾಯತ್ ಸದಸ್ಯರಾದ ಲತೀಫ್ ಬೋಲಮೆ, ರಫೀಕ್ ಗೋಳಿಪಡ್ಪು ಹಾಗೂ ಯುವ ಮುಖಂಡರಾದ ಆಸಿಫ್ ಸಜಿಪ, ನಿಸಾರ್ ಸಜಿಪ, ಹನಿಫ್ ಗೋಳಿಪಡ್ಪು ಜಸೀಮ್ ಸಜೀಪ, ಆಫ್ರಿಜ್ ಗೋಳಿಪಡ್ಪು, ಕಿಶೋರ್ ದೇರಾಜೆ, ಇಕ್ಬಾಲ್ ಗೋಳಿಪಡ್ಪು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.