ಬಂಟ್ವಾಳ

ಎಚ್.ಯು.ಐ.ಡಿ. ವಿರೋಧಿಸಿ ಬಂಟ್ವಾಳದಲ್ಲಿ ಆಭರಣ ವರ್ತಕರ ಪ್ರತಿಭಟನೆ

ಬಂಟ್ವಾಳ: ಹಾಲ್ ಮಾರ್ಕ್ ಗೆ ನಮಗೆ ಸ್ವಾಗತ ಆದರೆ ಎಚ್.ಯು.ಐ.ಡಿ. ನಮಗೆ ಬೇಡ ಎಂದು ಆಗ್ರಹಿಸಿ, ರಾಷ್ಟ್ರದಾದ್ಯಂತ ನಡೆಯುತ್ತಿರುವ ಆಭರಣ ವರ್ತಕರ ಪ್ರತಿಭಟನೆಯ ಅಂಗವಾಗಿ ಬಂಟ್ವಾಳದ ಜ್ಯುವೆಲರಿಗಳ ಮಾಲೀಕರು ಮತ್ತು ಸಿಬ್ಬಂದಿ ಅಸೋಸಿಯೇಶನ್ ಪದಾಧಿಕಾರಿಗಳೊಂದಿಗೆ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಬಂಟ್ವಾಳ ಜ್ಯುವೆಲರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಬಿ.ಸುರೇಶ್ ದಾಮೋದರ್ ಬಾಳಿಗಾ, ಆಭರಣದ ಮೇಲೆ ಎಚ್,ಯು.ಐ.ಡಿ. ಕಡ್ಡಾಯವಾಗಿ  ಅಳವಡಿಸುವ ಕಾಯ್ದೆಯ ವಿರುದ್ದ ಎಲ್ಲಾ ಜ್ಯುವೆಲರ್ಸ್ ಮಾಲೀಕರು ಸೇರಿದ್ದೇವೆ. ಕೋವಿಡ್ ನ ಈ ಸಮಯದಲ್ಲಿ ಈ ಕಾಯ್ದೆಯಿಂದ ಸಾಕಷ್ಟು ತೊಂದರೆಗಳಾಗುತ್ತದೆ ಎಂದು ಹೇಳಿದರು. ಬಳಿಕ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರಿಗೂ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜೊತೆ ಕಾರ್ಯದರ್ಶಿ ಸುನಿಲ್ ಬಿ, ವಿಶ್ವನಾಥ ಬಂಟ್ವಾಳ್, ಯುವರಾಜ ಆಚಾರ್ಯ, ಸತೀಶ ಭಂಡಾರಿ, ಹನೀಫ್, ಶಿವಾಜಿ ಜಾಧವ್, ಯೋಗೀಶ್ ನಾಯಕ್ ಸಹಿತ ಬಂಟ್ವಾಳದ ಎಲ್ಲ ಆಭರಣದಂಗಡಿಗಳ ವರ್ತಕರು, ಅಸೋಶಿಯೇಶನ್ ಪದಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಸುನಿಲ್ ಬಿ. ಸ್ವಾಗತಿಸಿದರು. ಗಿರೀಶ್ ಪೈ ವಂದಿಸಿದರು.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.