ವಿಟ್ಲ

ಕುಕ್ಕರೆಬೆಟ್ಟು ಪಾಟ್ರಕೋಡಿ ರಸ್ತೆ ಅಭಿವೃದ್ಧಿಗೆ ನಾಗರಿಕರ ಒತ್ತಾಯ: ರಸ್ತೆ ನವನಿರ್ಮಾಣ ಸಮಿತಿ ರಚನೆ

ಬಂಟ್ವಾಳ: ಕೆದಿಲ‌ ಹಾಗು ನೆಟ್ಲ ಮೂಡ್ನೂರ್ ಗ್ರಾಮ ಪಂಚಾಯತ್ ಗೆ ಒಳಪಟ್ಟ ಕುಕ್ಕರೆಬೆಟ್ಟು ಪಾಟ್ರಕೊಡಿಯ ಹದಗೆಟ್ಟ ರಸ್ತೆಯ ಕಾಮಗಾರಿಯನ್ನು ಮಾಡುವಂತೆ ಸರಕಾರಕ್ಕೆ ಆಗ್ರಹ ಸಲ್ಲಿಸುವ ಸಲುವಾಗಿ ಪಾಟ್ರಕೊಡಿ ಹಾಗು ಅಸುಪಾಸಿನ ಗ್ರಾಮಸ್ಥರು ಶ್ರಿಪಾದ್ ವಸಂತ ಭಟ್ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಪಾಟ್ರಕೊಡಿ ಕುಕ್ಕರೆಬೆಟ್ಟು ರಸ್ತೆಯ ನವನಿರ್ಮಾಣ ಸಮಿತಿ ಎಂಬ ಸಂಘಟನೆಯನ್ನು ರಚಿಸಿದ್ದಾರೆ. ಪ್ರಮುಖರಾದ ಪರಮೇಶ್ವರ ನಾವುಡ, ಮಹಮ್ಮದ್ ಮಾಸ್ತರ್, ಹಮೀದ್ ಹಾಜಿ , ರೊರ್ಬಟ್ ಲಸ್ರದೊ, ಪ್ರವೀಣ್ ಚಂದ್ರ, ಶೆಟ್ಟಿ, ಹರೀಶ್ ಕುದುಂಬ್ಲಾಡಿ, ವಿಶ್ವನಾಥ್ ಶೆಟ್ಟಿ, ಮೂಸಲ್ ಪೈಝಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದರು. ಈ ವೇಳೆ ಸಮಿತಿಯೊಂದನ್ನು ರಚಿಸಲಾಗಿದ್ದು, ನೂತನ ಸಮಿತಿಗೆ 14 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು, ಅಧ್ಯಕ್ಷರಾಗಿ ಶ್ರಿಪಾದ್ ವಸಂತ ಭಟ್, ಸದಸ್ಯರಾಗಿ ಪರಮೇಶ್ವರ ನಾವುಡ, ಮಹಮ್ಮದ್ ಮಾಸ್ಟರ್, ಹಮೀದ್ ಹಾಜಿ, ಪಾಟ್ರಕೊಡಿ, ರಾರ್ಬಟ್ ಲಸ್ರದೊ, ಪ್ರವೀಣ್ ಚಂದ್ರ ಶೆಟ್ಟಿ,ಹಬೀಬ್ ಮುಹ್ಸಿನ್ ಎಂ ಹೆಚ್., ಹರೀಶ್ ಕುದುಂಬ್ಲಾಡಿ, ವಿಶ್ವನಾಥ್ ಶೆಟ್ಟಿ, ಇಬ್ರಾಹಿಂ ಮಿತ್ತಪಡ್ಪು, ಸಂಕಪ್ಪ, ಚಂದ್ರಶೇಖರ, ಅಝೀಮ್ ಪಾಟ್ರಕೊಡಿ, ಹನೀಪ್ ಸಂಕದಬಳಿ ಮಾದ್ಯಮ ವಕ್ತಾರ ಅಬ್ದುಲ್ ಖಾದರ್ ಪಾಟ್ರಕೊಡಿ ಅವರನ್ನು ಆರಿಸಲಾಯಿತು,ಪಂಚಾಯತ್ ಸದಸ್ಯರಾದ ಹಬೀಬ್ ಮುಹ್ಸಿನ್ ಎಂ.ಎಚ್ ಸ್ವಾಗತಿಸಿ, ಅಬ್ದುಲ್ ಖಾದರ್ ಪಾಟ್ರಕೊಡಿ ವಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.