ಬಂಟ್ವಾಳ

ಪಕ್ಷದ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ: ಬಿ.ರಮಾನಾಥ ರೈ

ಪಕ್ಷದ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾವಳಪಡೂರು ಜಿಲ್ಲಾ ಪಂಚಾಯತ್ ಒಳಪಟ್ಟ ಕಾವಳಪಡೂರು ಪಂಚಾಯತ್ , ಪಂಜಿಕಲ್ಲು ಪಂಚಾಯತ್ ,ರಾಯಿ ಪಂಚಾಯತ್ ,ಸಂಗಬೆಟ್ಟ ಪಂಚಾಯತ್ ,ಕುಕ್ಕಿಪಾಡಿ ಪಂಚಾಯತ್,ಚೆನ್ನೈತೋಡಿ ಪಂಚಾಯತ್ ಒಳಪಟ್ಟ ಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಆಗುವ ದಬ್ಬಾಳಿಕೆಯನ್ನು ಖಂಡಿತ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಮುಂಬರುವ ಜಿಲ್ಲಾ ಹಾಗೂ ತಾಲೂಕ್ ಪಂಚಾಯತ್ ಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳ ಗೆಲುವಿನಲ್ಲಿ ನಾವು ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ವಿನಂತಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ಪ್ರತಿ ವಲಯ ಕಾಂಗ್ರೆಸ್ ಮಟ್ಟದಲ್ಲಿ ಕಡ್ಡಾಯವಾಗಿ ಸಭೆಗಳನ್ನು ನಡೆಸಿ ಪಕ್ಷದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಮನವಿ ಮಾಡಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್ ,ಚಂದ್ರಪ್ರಕಾಶ್ ಶೆಟ್ಟಿ ,ತಾಲೂಕ್ ಪಂಚಾಯತ್ ಮಾಜಿ ಸದಸ್ಯರಾದ ಮಲ್ಲಿಕಾ ವಿ ಶೆಟ್ಟಿ ,ಧನಲಕ್ಷ್ಮಿ ಸಿ ಬಂಗೇರ ,ಅಬ್ಬಾಸ್ ಆಲಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್,ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್ ,ಅಸಂಘಟಿತ ಕಾರ್ಮಿಕ ಸಂಘಟನೆಯ ಅಧ್ಯಕ್ಷರದ ರಾಮಚಂದ್ರ ಕಾಯರ್ ಮಾರ್, ಪ್ರದೇಶ ಕಾಂಗ್ರೆಸ್ ಕಾನೂನು ವಿಭಾಗದ ಕಾರ್ಯದರ್ಶಿಯಾದ ರಿಯಾಜ್ ಹುಸೈನ್,ಅಲ್ಪ ಸಂಖ್ಯಾತ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಶರೀಫ್ ,ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಸದಾನಂದ ಶೆಟ್ಟಿ ,ಜಿಲ್ಲಾ ಸಹಕಾರಿ ಸಂಘದ ಸಂಚಾಲಕರಾದ ಸುದರ್ಶನ್ ಜೈನ್,ಹಿಂದುಳಿದ ವರ್ಗಗಳ ನೂತನ ಅಧ್ಯಕ್ಷರಾದ ತಿಮ್ಮಪ್ಪ ಪೂಜಾರಿ , ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಉಮೇಶ್ ಕುಲಾಲ್ ನಾವೂರ ,ರಜನಿ ಬಾಬು ಕುಲಾಲ್,ಉಪಾಧ್ಯಕ್ಷರುಗಳಾದ ಉದಯ್ ಕುಮಾರ್ ಶೆಟ್ಟಿ ,ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ದಿನೇಶ್ ಶೆಟ್ಟಿಗಾರ್,ನವೀನ್ ಶೆಟ್ಟಿ,ಸುರೇಶ್ ಶೆಟ್ಟಿ,ಚಂದ್ರಶೇಖರ್ ಕರ್ಣ ,ಸುಧೀರ್ ಶೆಟ್ಟಿ,ಗಣೇಶ್ ನಾಯಕ್ ಕಾರ್ಪೆ , ಮುಖಂಡರಾದ ಸುಧಾಕರ್ ಶೆಣೈ , ಮಹಮ್ಮದ್ ಸಂಗಬೆಟ್ಟು ,ಜಗದೀಶ್ ಕೊಯಿಲ ,ಮಹಾಬಲ ಬಂಗೇರ ,ವೆಂಕಪ್ಪ ಪೂಜಾರಿ , ಅಬ್ದುಲ್ ಲತೀಫ್ ವಗ್ಗ ,ಜಯಕರ ಶೆಟ್ಟಿ ,ದೇವಪ್ಪ ಪೂಜಾರಿ ಕರ್ಪೆ ,ಬಿ ಆರ್ ಅಂಚನ್ ,ತಿಲಕ್ ಪೂಜಾರಿ ,ಜಲಜ ಪೂಜಾರಿ ಸಿದ್ದಕಟ್ಟೆ,ವಾಸು ಪೂಜಾರಿ ಕಜೆಕಾರು ,ಕಿಶೋರ್ ಕುಮಾರ್ ವಾಮದಪದವು , ಬೂತ್ ಸ ಮಿತಿ ಅಧ್ಯಕ್ಷರುಗಳು,ಕಾರ್ಯದರ್ಶಿಗಳು,ಹಾಗೂ ಸದಸ್ಯರು ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಮಿಕ ಸಂಘಟನೆಯ ಅಧ್ಯಕ್ಷರಾದ ಮನೋಹರ್ ಕುಲಾಲ್ ಧನ್ಯವಾದವಿತ್ತರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.