ಕಲ್ಲಡ್ಕ

ಸಂಭ್ರಮ ಎಲೆಕ್ಟ್ರಾನಿಕ್ಸ್ ಗೆ ಹತ್ತು ವರ್ಷದ ಹರ್ಷ, ಆಗಸ್ಟ್ 8ರವರೆಗೆ ವಿಶೇಷ ಮಾರಾಟ

ಬಂಟ್ವಾಳ: ಕಲ್ಲಡ್ಕ ಮತ್ತು ಬಿ.ಸಿ.ರೋಡಿನ ತಲಪಾಡಿಯಲ್ಲಿ ವೈವಿಧ್ಯಮಯ ಉಪಕರಣಗಳ ಮಳಿಗೆ ಹೊಂದಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ಗೆ ಹತ್ತರ ಹರುಷ. ಈ ಹಿನ್ನೆಲೆಯಲ್ಲಿ ಆಗಸ್ಟ್ 2ರಿಂದ ಆರಂಭಗೊಂಡಿರುವ ವಿಶೇಷ ಮಾರಾಟ ಉತ್ಸವ ಆಗಸ್ಟ್ 8ರವರೆಗೆ ನಡೆಯಲಿದೆ.

ಕಲ್ಲಡ್ಕದಲ್ಲಿ ಮಳಿಗೆ ಆರಂಭಗೊಂಡು ಕೆಲ ತಿಂಗಳಲ್ಲಿಯೇ ಕಲ್ಲಡ್ಕದ ಪರಿಸರವಷ್ಟೇ ಅಲ್ಲ, ವಿಟ್ಲ, ಕನ್ಯಾನ, ಮಾಣಿ ಕಡೆಗಳಲ್ಲೂ ಮನೆಮಾತಾಗಿ ತನ್ನ ಗ್ರಾಹಕ ಸ್ಪಂದನಾ ಚಟುವಟಿಕೆಗಳಿಂದ ಮನಗೆದ್ದ ಸಂಭ್ರಮ ಬಿ.ಸಿ.ರೋಡ್ ನ ತಲಪಾಡಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವಿಶಾಲವಾದ ಮಳಿಗೆ ಆರಂಭಿಸಿತ್ತು. ಇಲ್ಲೂ ಜನರ ಮನಗೆದ್ದ ಸಂಭ್ರಮ ಎಲೆಕ್ಟ್ರಾನಿಕ್ಸ್ ಇದೀಗ ತನ್ನ ಸ್ಥಾಪನೆಯ ಹತ್ತರ ಹರ್ಷವನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳುತ್ತಿದೆ. ವಿಶೇಷ  ಆಕರ್ಷಣೆಗಳನ್ನೇ ನೀಡುತ್ತಿದೆ.

ಸೋಮವಾರ  ಎರಡು ಶಾಖೆಗಳಲ್ಲಿಯೂ ದಶ ಸಂಭ್ರಮದ ವಿಶೇಷ ಮಾರಾಟಕ್ಕೆ ಚಾಲನೆ ನೀಡಿಲಾಗಿದ್ದು ಕಲ್ಲಡ್ಕದ ಪ್ರಧಾನ ಕಚೇರಿಯಲ್ಲಿ ಉದ್ಯಮಿ ಜಯಾನಂದ ಆಚಾರ್ಯ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ಸಂದರ್ಭ ಚೈತನ್ಯ ಸಂಕೀರ್ಣದ  ಮಾಲಕ ತಿರುಮಲೇಶ್ವರ ಭಟ್, ಬ್ಯಾಂಕ್ ಆಫ್ ಬರೋಡಾ ಕಲ್ಲಡ್ಕ ಶಾಖೆಯ ಪ್ರಬಂಧಕ ಸದಾಶಿವ ಆಚಾರ್ಯ, ಬ್ಯಾಂಕ್ ಅಧಿಕಾರಿ ಧನಂಜಯ, ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಸಂಭ್ರಮ ಎಲೆಕ್ಟ್ರಾನಿಕ್ಸ್‌ನ್ ಮಾಲಕ ಗಿರೀಶ್ ನಿಟಿಲಾಪುರ ಉಪಸ್ಥಿತರಿದ್ದರು.

ಜಾಹೀರಾತು

ಬಿ.ಸಿ.ರೋಡಿನ ತಲಪಾಡಿ ಶಾಖೆಯಲ್ಲಿ ನಡೆದ ಸಮಾರಂಭವನ್ನು ಕಟ್ಟಡದ ಮಾಲಕ ಎ.ಬಿ. ಶೆಟ್ಟಿ ದೀಪ ಬೆಳಗಿ ಉದ್ಘಾಟಿಸಿದರು. ಈ ಸಂದರ್ಭ ಲಿವಾ ಅಗರ್‌ಬತ್ತಿ ವಿತರಕ ಪದ್ಮನಾಭ ಬಡಕಬೈಲು,  ಸಂಭ್ರಮ ಎಲೆಕ್ಟ್ರಾನಿಕ್ಸ್‌ನ ಹಿರಿಯ ವ್ಯವಸ್ಥಾಪಕ ಯೋಗೀಶ್, ತಲಪಾಡಿ ಶಾಖಾ ಕಚೇರಿ ವ್ಯವಸ್ಥಾಪಕ  ಪ್ರಸಾದ್ ಉಪಸ್ಥಿತರಿದ್ದರು. ಆ. 2ರಿಂದ ಆ. 8ರವರೆಗೆ ಸಂಸ್ಥೆ ಸ್ಥಾಪನೆಯ ದಶಸಂಭ್ರಮದ ಅಂಗವಾಗಿ ವಿಶೇಷ ದರ ಕಡಿತದ ಮಾರಾಟ ನಡೆಯಲಿದ್ದು ಗಾಹಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

4 hours ago