ಬಂಟ್ವಾಳ

ಲೊರೆಟ್ಟೊದಲ್ಲಿ ರೈತ ನಾಯಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಬಂಟ್ವಾಳ: ಇತ್ತೀಚೆಗೆ ಚಿಕ್ಕಮಗಳೂರು ಸಮೀಪ ವಾಹನ ಅಪಘಾತದಲ್ಲಿ ನಿಧನಹೊಂದಿದ ರೈತಮುಖಂಡರಾದ ಎಂ.ರಾಮು ಚೆನ್ನಪಟ್ಟಣ ಮತ್ತು ಜಿ.ಟಿ.ರಾಮಸ್ವಾಮಿ ಅವರಿಗೆ ಹಸಿರು ನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಲೊರೆಟ್ಟೊದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ರೈತಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಅವರು ನುಡಿನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ರಾಜ್ಯಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ.ಯಾದವ ಶೆಟ್ಟಿ, ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ರಾಜ್ಯ ರೈತ ಸಂಘ ರಾಜ್ಯ ಸಮಿತಿಯ ಕಾಯಂ ಆಹ್ವಾನಿತರಾದ ಸನ್ನಿ ಡಿಸೋಜ, ರೈತ ಮುಖಂಡರಾದ ಬಿ.ಸುರೇಶ್ ಭಟ್, ಸುಳ್ಯ ತಾಲೂಕು ಅಧ್ಯಕ್ಷರಾದ ಲೋಲಜಾಕ್ಷ ಗೌಡ ಭೂತಕಲ್ಲು ನುಡಿನಮನ ಸಲ್ಲಿಸಿದರು.

ಸಿ.ಐ.ಟಿ.ಯು.ನ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸುರೇಂದ್ರ ಕೊಟ್ಯಾನ್, ರೈತ ಮುಖಂಡರಾದ ರೋನಿ ಮೆಂಡೊನ್ಸ, ಸುಧಾಕರ ಜೈನ್ ಕೊಕ್ರಾಡಿ, ಬಾಲಸುಬ್ರಮಣ್ಯ ಹೊಳ್ಳ, ಹರ್ಷಕುಮಾರ್ ಹೆಗ್ಡೆ ತೀರ್ಥರಾಮ ಗೌಡ ಪೆರ್ನೋಜಿ, ಸೆಬಾಸ್ಟಿಯನ್ ಡಿಸೋಜ, ಸುರೇಂದ್ರ ಕೋರ್ಯ, ರೂಪಾಸ್ ಪಿಂಟೋ, ವಿವಿಯನ್ ಪಿಂಟೋ, ಮಂಜುನಾಥ ಮಡ್ತಿಲ, 400 ಕೆ.ವಿ.ವಿದ್ಯುತ್ ಮಾರ್ಗದ ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕರಾದ ರೋಯ್ ಕಾರ್ಲೋ, ಡಿ.ವೈ.ಎಪ್.ಐ.ಮುಖಂಡರುಗಳಾದ ತುಳಸಿದಾಸ್ ವಿಟ್ಲ, ಅಲ್ತಾಪ್ ತುಂಬೆ ಹಾಗೂ ಇತರ ರೈತ ಹೋರಾಟಗಾರರು ಭಾಗವಹಿಸಿದ್ದರು

ಜಾಹೀರಾತು

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ ಸ್ವಾಗತಿಸಿ ಜಿಲ್ಲಾ ಉಪಾಧ್ಯಕ್ಷರಾದ ಅಲ್ವೀನ್ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.ಬಂಟ್ವಾಳ ತಾಲೂಕು ಸಂಘಟನಾ ಕಾರ್ಯದರ್ಶಿ ಸದಾನಂದ ಶೀತಲ್ ವಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.