ಬಂಟ್ವಾಳ

ರೇಷನ್ ಕಾರ್ಡ್ ದಾರರು ನ್ಯಾಯಬೆಲೆ ಅಂಗಡಿಗೆ ಹೋದರೆ ನಿಯಮ ಪಾಲಿಸಿ

ನ್ಯಾಯಬೆಲೆ ಅಂಗಡಿಯಲ್ಲಿ ಮೇ ತಿಂಗಳಿಗೆ ಏನು ದೊರಕುತ್ತದೆ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನ್ಯಾಯಬೆಲೆ ಅಂಗಡಿಗಳು  ತಿಂಗಳ ಕೊನೆಯ ದಿನಾಂಕದವರೆಗೂ ಪ್ರತಿದಿನ ಪಡಿತರ ವಿತರಣೆ ಮಾಡಲು ಕಡ್ಡಾಯವಾಗಿ ತೆರೆದಿರುತ್ತವೆ. ತಿಂಗಳ ಕೊನೆಯವರೆಗೂ ಪಡಿತರ ವಿತರಣೆ ಮಾಡುವುದರಿಂದ ಪಡಿತರ ಚೀಟಿದಾರರು ಆತಂಕ ಪಡದೇ, ಪಡಿತರ ಪಡೆಯಬಹುದಾಗಿರುತ್ತದೆ. ಬೆಳಗ್ಗೆ 7 ಗಂಟೆಯಿಂದ 10 ಗಂಟೆಯ ಸಮಯದಲ್ಲಿ ಪ್ರತಿದಿನ ಪಡಿತರ ಚೀಟಿದಾರರು ಪಡಿತರ ಪಡೆಯುತ್ತಿರುವ ಈ ಸಂದರ್ಭ ಸಾಮಾಜಿಕ ಅಂತರಕಾಯ್ದು ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ಮೊದಲು ಬರುವ ಸರಾಸರಿ 100-150 ಪಡಿತರ ಚೀಟಿದಾರರಿಗೆ ಆದ್ಯತೆ ಮೇರೆಗೆ ಸಾಲಿನಲ್ಲಿ ನಿಲ್ಲಲು ಕ್ಯೂ ಸ್ಲಿಪ್ ಟೋಕನ್ ಗಳನ್ನು ನೀಡಲು ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ 2021 ಮೇ ಮಾಹೆಗೆ 5825.665  ಎಂ.ಟಿ. ಅಕ್ಕಿ, 5608.645 ಎಂ.ಟಿ ಅಕ್ಕಿ,  501.696 ಎಂ.ಟಿ.ಗೋಧಿ  ಹಾಗೂ 170 ಎಂ.ಟಿ ಆದ್ಯತೇತರ ಪಡಿತರ ಚೀಟಿ ಅಕ್ಕಿಯು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಬಿಡುಗಡೆಯಾಗಿರುತ್ತದೆ. ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ 5 ಕೆ.ಜಿ ಹೆಚ್ಚುವರಿ ಅಕ್ಕಿಯನ್ನು ಪಡಿತರ ಚೀಟಿಯ ಪ್ರತಿ ಸದಸ್ಯರು ಪಡೆಯುತ್ತಾರೆ.
ಈ ಕೆಳಕಂಡ ಪ್ರಮಾಣದಲ್ಲಿ ಒಟ್ಟು ಪಡಿತರವನ್ನು ಪಡೆಯಬಹುದಾಗಿರುತ್ತದೆ.: ಅಂತ್ಯೋದಯ ಪಡಿತರ ಚೀಟಿಗೆ:   ಉಚಿತ-35 ಕೆ.ಜಿ ಅಕ್ಕಿ ಜೊತೆಗೆ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ವಿತರಿಸಲಾಗುವುದು. ಆದ್ಯತಾ (ಬಿ.ಪಿ.ಎಲ್) ಪಡಿತರಚೀಟಿಗೆ:  ಉಚಿತಪ್ರತಿ ಸದಸ್ಯನಿಗೆ 10 ಕೆ.ಜಿಅಕ್ಕಿ  ಜೊತೆಗೆ ಪ್ರತಿಕಾರ್ಡಿಗೆ 2 ಕೆ.ಜಿಗೋಧಿ ವಿತರಿಸಲಾವುದು. ಆದ್ಯತೇತರ (.ಪಿ.ಎಲ್) ಪಡಿತರ ಚೀಟಿಗೆ ಕೆ.ಜಿ.ಗೆ ರೂ.15 ರದರದಲ್ಲಿ ಏಕ ಸದಸ್ಯನಿಗೆ 5 ಕೆ.ಜಿ ಹಾಗೂ ಬಹುಸದಸ್ಯ ಪಡಿತರ ಚೀಟಿಗೆ 10ಕೆ.ಜಿ  ಪಡಿತರ ಅಕ್ಕಿ  ವಿತರಿಸಲಾಗುವುದು ಎಂದು ಆಹಾರ ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.