ಬಂಟ್ವಾಳ

ರಾಘವೇಶ್ವರ ಶ್ರೀಗಳಿಂದ ಆಶೀರ್ವಾದ ಪಡೆದ ಸಚಿವ ಅಂಗಾರ

ಬಂಟ್ವಾಳ: ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು ಶ್ರೀ ಮಾಣಿ ಪೆರಾಜೆಯ ಶ್ರೀ ರಾಮಚಂದ್ರಾಪುರ ಮಠದಲ್ಲಿ ಬಂದರು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್ ಉಪಸ್ಥಿತರಿದ್ದರು. ಆಶೀರ್ವಚನ ನೀಡಿದ ಶ್ರೀಗಳು, “ಉತ್ತಮ ಸಮಾಜ ಸೇವೆಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ” ಎಂದು ಹಾರೈಸಿದರು.

ನೂತನ ಗುರಿಕಾರರಿಗೆ ಸಾಠಿ ಸನದು ಪ್ರಧಾನ, ಪ್ರತಿಭಾ ಪುರಸ್ಕಾರ, ವಿವಿಗೆ ಸಮರ್ಪಣೆ ನಡೆಯಿತು.  ಪ್ರಮುಖರಾದ ನಾಗರಾಜ ಭಟ್ ಪಿದಮಲೆ, ಶ್ರೀಕೃಷ್ಣ ಮಿನಗದ್ದೆ, ಶೈಲಜಾ ಕೆ. ಟಿ. ಭಟ್, ಅರವಿಂದ ದರ್ಬೆ, ದೇವಿಕಾ  ಶಾಸ್ತ್ರಿ, ಹಾರಕರೆ ನಾರಾಯಣ ಭಟ್,        ಬಂಗಾರಡ್ಕ ಜನಾರ್ದನ ಭಟ್, ಮೈಕೆ ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
NEWSDESK

www.bantwalnews.comನಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳ, ಲೇಖನಗಳ ವಿಚಾರಗಳಿಗೂ ವೆಬ್ ತಾಣಕ್ಕೂ ಸಂಬಂಧವಿಲ್ಲ. ಇದು ಓದುಗರ ಗಮನಕ್ಕೆ. NOTE: : All opinions regarding the advertisments and articles published in bantwalnews and the related topic are those of the author and advertiser, and this has no relation to BantwalNews. Recommendations and suggestions provided here are left for the readers' consideration.