ಬಂಟ್ವಾಳ: ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು ಶ್ರೀ ಮಾಣಿ ಪೆರಾಜೆಯ ಶ್ರೀ ರಾಮಚಂದ್ರಾಪುರ ಮಠದಲ್ಲಿ ಬಂದರು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್ ಉಪಸ್ಥಿತರಿದ್ದರು. ಆಶೀರ್ವಚನ ನೀಡಿದ ಶ್ರೀಗಳು, “ಉತ್ತಮ ಸಮಾಜ ಸೇವೆಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ” ಎಂದು ಹಾರೈಸಿದರು.
ನೂತನ ಗುರಿಕಾರರಿಗೆ ಸಾಠಿ ಸನದು ಪ್ರಧಾನ, ಪ್ರತಿಭಾ ಪುರಸ್ಕಾರ, ವಿವಿಗೆ ಸಮರ್ಪಣೆ ನಡೆಯಿತು. ಪ್ರಮುಖರಾದ ನಾಗರಾಜ ಭಟ್ ಪಿದಮಲೆ, ಶ್ರೀಕೃಷ್ಣ ಮಿನಗದ್ದೆ, ಶೈಲಜಾ ಕೆ. ಟಿ. ಭಟ್, ಅರವಿಂದ ದರ್ಬೆ, ದೇವಿಕಾ ಶಾಸ್ತ್ರಿ, ಹಾರಕರೆ ನಾರಾಯಣ ಭಟ್, ಬಂಗಾರಡ್ಕ ಜನಾರ್ದನ ಭಟ್, ಮೈಕೆ ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)