ವಿಟ್ಲ

ವಿಟ್ಲ ಜಾತ್ರೆಯಲ್ಲಿ ವೈಭವದ ರಥೋತ್ಸವಕ್ಕೆ ಸಾಕ್ಷಿಯಾದ ಭಕ್ತರು

ಚಿತ್ರ: ಶಿಲ್ಪಿ ಸ್ಟುಡಿಯೋ ವಿಟ್ಲ (ಸದಾಶಿವ ಬನ)

ಬಂಟ್ವಾಳ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ವೈಭವದ ರಥೋತ್ಸವವನ್ನು ಸೇರಿದ್ದ ಸಾವಿರಾರು ಮಂದಿ ಕಣ್ತುಂಬಿಕೊಂಡರು. ಈ ವೇಳೆ ಸಿಡಿಮದ್ದುಗಳ ಚಿತ್ತಾಕರ್ಷಕ ಪ್ರದರ್ಶನವೂ ನಡೆಯಿತು.ಧ್ವಜಾರೋಹಣ, ಉತ್ಸವಬಲಿ, ಕಟ್ಟೆಪೂಜೆಬಳಿಕಬಟ್ಟಲುಕಾಣಿಕೆ ನೀಡುವುದರೊಂದಿಗೆ ಜಾತ್ರೆ ಆರಂಭಗೊಂಡಿತ್ತು. ನಿತ್ಯೋತ್ಸವಗಳ ಜೊತೆಗೆ ಕೇಪುವಿನಿಂದಶ್ರೀಮಲರಾಯದೈವದಭಂಡಾರಆಗಮಿಸಿ ಜಾತ್ರೆ ವೈಭವವನ್ನು ಇಮ್ಮಡಿಗೊಳಿಸಿತ್ತು. ಪ್ರತಿದಿನ ವಿವಿಧ ಉತ್ಸವಗಳು ನಡೆದ ಬಳಿಕ ಗುರುವಾರ ರಾತ್ರಿ ಮಹಾರಥೋತ್ಸವನಡೆಯಿತು. ಬೆಳಗ್ಗೆದರ್ಶನಬಲಿ, ರಾಜಾಂಗಣದಬಟ್ಲುಕಾಣಿಕೆ, ಪ್ರಸಾದವಿತರಣೆ,ಕಡಂಬುವಿನಿಂದಕೊಡಮಣಿತ್ತಾಯದೈವದಭಂಡಾರಕ್ಷೇತ್ರಕ್ಕೆಆಗಮನ, ರಾತ್ರಿಮಹಾರಥೋತ್ಸವಬೀದಿಮೆರವಣಿಗೆ, ಶಯನೋತ್ಸವನಡೆಯಿತು. ಅವಭೃತ ಸ್ನಾನ ಕೊಡಂಗಾಯಿಗೆ ಸವಾರಿ ಧ್ವಜಾವರೋಹಣ, ಸಂಪ್ರೋಕ್ಷಣೆ ಬಳಿಕ ಕೇಪುವಿನ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ನಡೆಯಲಿದೆ.  

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts