ಬಂಟ್ವಾಳ

ಮೇಲ್ಕಾರಿನಲ್ಲಿ 21ನೇ ವರ್ಷದ ಯಕ್ಷಗಾನ ಬಯಲಾಟ 13ರಂದು

ಬಂಟ್ವಾಳ: ಶ್ರೀದೇವಿ ಬಯಲಾಟ ಸಮಿತಿ ಮೆಲ್ಕಾರ್ ಇದರ 21ನೇ ವರ್ಷದ ಯಕ್ಷಗಾನ ಬಯಲಾಟವಾಗಿ ಭಾನುವಾರ 13ರಂದು ರಾತ್ರಿ ನಡೆಯಲಿದೆ

ರಾತ್ರಿ 9.30ಕ್ಕೆ ಮೆಲ್ಕಾರ್ ಶ್ರೀ ದೇವಿ ಮೈದಾನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ದ್ರೌಪದಿ ಪ್ರತಾಪ ಎಂಬ ಪುಣ್ಯ ಕಥಾಭಾಗವನ್ನು  ಬಯಲಾಟವಾಗಿ ಆಡಿತೋರಿಸಲಿರುವರು. ಕಾರ್ಯಕ್ರಮದಲ್ಲಿ ಮೆಲ್ಕಾರ್ ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ  ಮಧ್ಯಾಹ್ನ ಗಂಟೆ 12 ಕ್ಕೆ ಶ್ರೀದೇವಿಯ ಮಹಾಪೂಜೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿರುವುದು. ಸಂಜೆ ಗಂಟೆ 6ಕ್ಕೆ  ಭಜನಾ ಮಂದಿರದಿಂದ  ಗೊಂಬೆ ಕುಣಿತದೊಂದಿಗೆ ಶ್ರೀ ದೇವಿಯು  ಭವ್ಯ ಮೆರವಣಿಗೆ ಹೊರಡಲಿರುವುದು. ಆಸಕ್ತರು ಭಾಗವಹಿಸಿ ಕೋವಿಡ್ ನಿಯಮ ಪಾಲಿಸಬೇಕಾಗಿ ಬಯಲಾಟ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.