ಬಂಟ್ವಾಳ: ಭಾರತೀಯ ಜನ ಕಲಾ ಸಮಿತಿ ಬಂಟ್ವಾಳ ಮತ್ತು ಯುವಜನ ಬಳಗದ ಸಹಯೋಗದಲ್ಲಿ ಬೆದ್ರಗುಡ್ಡೆಯಿಂದ, ನಲಿಕೆಮಾರು, ಮೊಡಂಕಾಪು ರಸ್ತೆ ತನಕ ಶ್ರಮಾದಾನ ನಡೆಸಲಾಯಿತು.
ಬಿ. ಸಿ ರೋಡಿನಿಂದ ಪೊಳಲಿಗೆ ಹೋಗುವ ವಿವೇಕಾನಂದ ರಸ್ತೆಯ ಇಕ್ಕೆಲಗಳಲ್ಲಿ ರಾಶಿಗಟ್ಟಲೆ ಪ್ಲಾಸ್ಟಿಕ್ ಬಾಟಲಿಗಳು ಇದ್ದು, ಹಳ್ಳಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆ ಇರಲಿಲ್ಲ. ಜನವರಿ 12 ರಾಷ್ಟ್ರೀಯ ಯುವ ದಿನ. ಅವತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನದ ಹಿನ್ನೆಲೆಯಲ್ಲಿ ಅದರ ಪೂರ್ವ ಭಾವಿಯಾಗಿ ಈ ವಿವೇಕಾನಂದ ರಸ್ತೆಯ ಎರಡೂ ಕಡೆ ಬಿಸಾಕಿರುವ ಕಸ ಎತ್ತುವ ಸಂಕಲ್ಪವನ್ನು ತಂಡ ತೊಟ್ಟುಕೊಂಡಿತು.ಸಾಮಾಜಿಕ ಕಾರ್ಯಕರ್ತ ಜನಾರ್ಧನ ಕೆಸರಗದ್ದೆ ಯವರ ನಿರ್ದೇಶನದಂತೆ ಸ್ವಚ್ಛತಾ ಕೆಲಸವನ್ನು ಮಾಡಲಾಯಿತು. ಶ್ರೀನಿವಾಸ ಭಂಡಾರಿ, ಸುರೇಶ್ ಕುಮಾರ್, ಖಲೀಫ್, ಪ್ರಾಣೇಶ್, ಮದನ್, ಹರ್ಷಿತಾ, ಧನುಷ್, ನಿಶಾಂತ್, ನಿಷಿತಾ, ಮಮ್ತಾಜ್, ಶ್ವೇತಾ, ವಿಜಯ ಕುಮಾರ್ ಮತ್ತು ಬಳಗ ಸಹಕರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…