ಸಾಧಕರು

ರಮಾನಂದ ನೂಜಿಪ್ಪಾಡಿ ಅವರಿಗೆ ಯೆನೆಪೊಯಾ ಬೆಸ್ಟ್ ಟೀಚರ್ಸ್ ಅವಾರ್ಡ್

ಜಾಹೀರಾತು

ಬಂಟ್ವಾಳ: ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ ಉಪ ಪ್ರಾಂಶುಪಾಲ, ಪ್ರಸಕ್ತ  ಹಿಂದಿ ಶಿಕ್ಷಕರಾಗಿರುವ ರಮಾನಂದ ನೂಜಿಪ್ಪಾಡಿ  ಅವರಿಗೆ ವೈ.ಎಂ.ಕೆ. ಮೆಮೋರಿಯಲ್ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ಯೆನೆಪೊಯಾ ಬೆಸ್ಟ್ ಟೀಚರ್ಸ್ ಅವಾರ್ಡ್ 2020 ಪ್ರಶಸ್ತಿ ಲಭಿಸಿದೆ.

ಉತ್ತಮ ಫಲಿತಾಂಶ  ಶೈಕ್ಷಣಿಕ ಗುಣಮಟ್ಟ ಹೆಚ್ಚಳ, ಎಲ್ಲಾ ತರಗತಿಗಳಿಗೆ ಸ್ಮಾರ್ಟ್ ಕ್ಲಾಸ್, ಸೋಲಾರ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಂದರ ಕೈತೋಟ ಅಚ್ಚುಕಟ್ಟಾದ ಗಾರ್ಡನ್ , ತರಗತಿ ಕೋಣೆಗಳಿಗೆ ಟೈಲ್ಸ್ ಅಳವಡಿಕೆ, ಸುಸಜ್ಜಿತ ಕಂಪ್ಯೂಟರ್ ಕೊಠಡಿ, ಔಷಧಿ ಸಸ್ಯಗಳು ಹಣ್ಣಿನ ಗಿಡಗಳನ್ನು ಒಳಗೊಂಡ ಶಾಲಾವನ, ನವೀನ ತಂತ್ರಜ್ಞಾನಗಳನ್ನು ಒಳಗೊಂಡ ಪಾಠ ಬೋಧನೆ, ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಗಿನ ಉಪಹಾರದ ವ್ಯವಸ್ಥೆ, ಆಟೋಮೊಬೈಲ್ ಹಾಗೂ ಬ್ಯೂಟಿ ಅಂಡ್ ವೆಲ್ನೆಸ್ ತರಬೇತಿ, ಎನ್ಎಸ್ಎಸ್ ಘಟಕ, ರೆಡ್ ಕ್ರಾಸ್ ಸಂಘ, ಸತತ ಪರಿಸರ ಮಿತ್ರ ಪ್ರಶಸ್ತಿ, ಉತ್ತಮ ಕ್ರೀಡಾ ಚಟುವಟಿಕೆಗಳು, ಶಿಕ್ಷಣ ಇಲಾಖೆಯ ತಾಲೂಕು ಜಿಲ್ಲಾ ಕಾರ್ಯಕ್ರಮಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಮತ್ತು ಕಾರ್ಯಕ್ರಮಗಳು, ಸಾವಯವ ಕೃಷಿ ತರಬೇತಿ ಯೋಗ ತರಬೇತಿ, ಮಣಿಪಾಲ್ ಸಂಸ್ಥೆಯಿಂದ ಕನ್ನಡ ವರ್ಚುವಲ್ ಕ್ಲಾಸ್, ತಾಲೂಕು ಜಿಲ್ಲೆ ರಾಜ್ಯ ವಿದೇಶದಿಂದ ಅನುದಾನ ಕ್ರೂಡೀಕರಣ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ, ಸ್ವಚ್ಛ-ಸುಂದರ ಹೈಟೆಕ್ ಶೌಚಾಲಯ ಮುಂತಾದ ಹಲವು ಕ್ರಿಯಾತ್ಮಕ ಚಟುವಟಿಕೆಗಳು ಇವರ ವಿಶೇಷತೆ.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.