ಬಂಟ್ವಾಳ

ಆಲ್-ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಬಂಟ್ವಾಳ ತಾಲೂಕು ಸಮಿತಿ ರಚನೆ

ಜಾಹೀರಾತು

ಬಂಟ್ವಾಳ: ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಬಂಟ್ವಾಳ ತಾಲೂಕು ಸಮಿತಿ ರಚನೆ ಬಂಟ್ವಾಳ ತಾಲೂಕು ಎನ್.ಆರ್.ಸಿ. ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್. ಮಹಮ್ಮದ್ ಶಾಫಿ ಅಧ್ಯಕ್ಷತೆಯಲ್ಲಿ ಜರಗಿತು.

ರಾಜ್ಯ ಕಾರ್ಯಾಧ್ಯಕ್ಷ ಎಸ್ ಅಬೂಬಕ್ಕರ್ ಸಜೀಪ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.ರಾಜ್ಯ ಸಲಹಾ ಸಮಿತಿಯ ಪ್ರಧಾನ ಸಲಹೆಗಾರರಾದ ರಫೀಕ್ ಮಾಸ್ಟರ್ ದಿಕ್ಸೂಚಿ ಭಾಷಣವನ್ನು ಮಾಡಿದರು

ಜಿಲ್ಲಾಧ್ಯಕ್ಷರಾದ ಆಸೀಫ್ ಚೊಕ್ಕಬೆಟ್ಟು, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ ಬೋಳಂತೂರು, ಯೂತ್ ವಿಂಗ್ ಅಧ್ಯಕ್ಷರಾದ ಹಾಶೀರ್ ಪೇರಿಮಾರ್, ಕರಾವಳಿ ವಲಯದ ವೈದ್ಯಕೀಯ ಉಸ್ತುವಾರಿಯಾದ ಸಿದ್ದಿಕ್ ಕೊಳಕೆ ಉಪಸ್ಥಿತರಿದ್ದರು

ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ಎಂ.ಎಂ ಮಹಮ್ಮದ್ (ಮೋನು) ನಂದಾವರ, ಉಪಾಧ್ಯಕ್ಷರಾಗಿ ಅಬ್ದುಲ್ ಸಲಾಂ, ಅಬೂಬಕ್ಕರ್ ಫರಂಗಿಪೇಟೆ, ಇಬ್ರಾಹಿಂ ಕೈಲಾರ್, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರು ಬಿ.ಸಿ ರೋಡ್, ಕಾರ್ಯದರ್ಶಿಯಾಗಿ ಹಾರೂನ್ ರಶೀದ್ ಬಂಟ್ವಾಳ, ಖಜಾಂಜಿಯಾಗಿ ಅಲ್ತಾಫ್ ಮೇಲ್ಮನೆ ಫರಂಗಿಪೇಟೆ, ಸಂಘಟನಾ ಕಾರ್ಯದರ್ಶಿಯಾಗಿ ನವಾಜ್ ಬಡಕಬೈಲ್, ರಮ್ಲಾನ್ ಕಲಾಯಿ, ಬಂಟ್ವಾಳ ತಾಲೂಕು ಸಮಿತಿಯ ವೈದ್ಯಕೀಯ ಉಸ್ತುವಾರಿಯಾಗಿ ಇಶಾಕ್ ತುಂಬೆ, ಮುಖ್ತಾರ್ ಅಮ್ಮೆಮಾರ್, ಬಂಟ್ವಾಳ ತಾಲೂಕು ಘಟಕದ ಐಟಿ ಸೆಲ್ ಉಸ್ತುವಾರಿಯಾಗಿ ಇಶ್ರಾರ್ ಗೂಡಿನಬಳಿ, ಸವಾಝ್ ಬಂಟ್ವಾಳ ರವರನ್ನು ನೇಮಕ ಮಾಡಲಾಯಿತು

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.