ಬಂಟ್ವಾಳ

ಬ್ರಹ್ಮರಕೂಟ್ಲುವಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆ ಅನಾವರಣ

ಜಾಹೀರಾತು

ಬಂಟ್ವಾಳ: ವಿಹಿಂಪ, ಬಜರಂಗದಳ ಛತ್ರಪತಿ ಶಾಖೆ, ಬ್ರಹ್ಮರಕೂಟ್ಲು ಘಟಕ ಇದರ ವತಿಯಿಂದ ಬ್ರಹ್ಮರಕೂಟ್ಲುವಿನಲ್ಲಿ ನಿರ್ಮಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಭಾನುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅನಾವರಣಗೊಳಿಸಿದರು. ಶಿವಾಜಿ ಮಹಾರಾಜರ ಪ್ರತಿಮೆ ಕಣ್ಣೆದುರು ಕಂಡಾಗ ಯುವಕರ ಮನಸ್ಸಿನಲ್ಲಿ ತನ್ನಿಂತಾನೇ ಶಿವಾಜಿ ಮಹಾರಾಜರ ಆದರ್ಶ ಗುಣಗಳು ಜಾಗೃತವಾಗಿ, ಹಿಂದೂ ಸಮಾಜವನ್ನು ಒಗ್ಗೂಡಿಸಿ ಮುನ್ನಡೆಸುವ ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಸಹಕಾರಿಯಾಗುವುದು ಎಂದು ಶಾಸಕರು ಆಶಯವನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು. ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ತಾಪಂ ಸದಸ್ಯ ಗಣೇಶ್ ಸುವರ್ಣ,ವಿಹಿಂಪ ಬಜರಂಗದಳ ಪ್ರಮುಖರಾದ ಶರಣ್ ಪಂಪ್ ವೆಲ್, ಅಶೋಕ್ ಶೆಟ್ಟಿ ಸರಪಾಡಿ, ಗುರುರಾಜ್ ಬಂಟ್ವಾಳ, ಭೋಜ ಪೂಜಾರಿ ದರಿಬಾಗಿಲು, ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ವಿಜಯ್ ತುಂಬೆ, ಯೋಗೀಶ್ ಕಡೆಗೋಳಿ, ಸುಶಾನ್ ಬೊಳ್ಳಾರಿ, ಪ್ರಮುಖರಾದ ಸುರೇಶ್ ಶಿವಾಜಿನಗರ , ಅನಿಲ್ ಕುಮಾರ್ ಪಂಡಿತ್, ಸಂಪ್ರೀತ್ ಆಯರಗುಡ್ಡೆ, ಮನೋಜ್ ವಳವೂರು, ಮನೋಹರ ಕಂಜತ್ತೂರು, ಅಜಿತ್ ವಳವೂರು, ಪ್ರಸಾದ್ ವಳವೂರು, ಸಮ್ಮಿತ್ ಬ್ರಹ್ಮರಕೂಟ್ಲು, ಸುಶಾಂತ್ ವಳವೂರು ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.