ಜಿಲ್ಲಾ ಸುದ್ದಿ

ಮತ್ತೊಂದು ಹತ್ಯೆಗೆ ಬೆಚ್ಚಿಬಿದ್ದ ಬಂಟ್ವಾಳ, ಎರಡೇ ದಿನಗಳಲ್ಲಿ ಬಂಟ್ವಾಳದಲ್ಲಿ ಎರಡು ಮರ್ಡರ್

ಜಾಹೀರಾತು

ಎರಡು ದಿನಗಳ ಅವಧಿಯಲ್ಲಿ ಎರಡು ಹತ್ಯಾ ಪ್ರಕರಣಗಳು ಬಂಟ್ವಾಳದ ಜನತೆಯನ್ನು ಬೆಚ್ಚಿ ಬೀಳಿಸಿವೆ. ಬುಧವಾರ ಮಧ್ಯಾಹ್ನ ಸುರೇಂದ್ರ ಬಂಟ್ವಾಳ್ (39) ಬಂಟ್ವಾಳದ ಫ್ಲ್ಯಾಟ್ ಒಂದರಲ್ಲಿ ಕೊಲೆಯಾಗಿ ಬಿದ್ದಿದ್ದರೆ, ಶುಕ್ರವಾರ ಸಂಜೆ ಮೇಲ್ಕಾರ್ ನ ಲ್ಲಿ ಫಾರೂಕ್ (28) ಎಂಬಾತನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ. ಒಂದು ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ಪ್ರಕರಣವೂ ಸಂಭವಿಸಿರುವುದು ಬಂಟ್ವಾಳ ಪೊಲೀಸರಿಗೆ ಸವಾಲಾದರೆ, ಎರಡು ಹತ್ಯೆ ಘಟನೆಗಳು ಬಂಟ್ವಾಳ ಜನತೆಯನ್ನು ಬೆಚ್ಚಿಬೀಳಿಸಿವೆ.

ಶುಕ್ರವಾರ ಸಂಜೆ ಮೇಲ್ಕಾರ್ ನ ಗುಡ್ಡೆಯಂಗಡಿ ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಹತ್ಯೆ ನಡೆಸಲಾಗಿದೆ.  ಮೇಲ್ಕಾರಿನ ಗುಡ್ಡೆಯಂಗಡಿ ಎಂಬಲ್ಲಿ ಘಟನೆ ನಡೆದಿದ್ದು, ಕಲ್ಲಡ್ಕ ನಿವಾಸಿ ಚೆನ್ನಾ ಫಾರೂಕ್ (28) ನನ್ನು ಕೊಲೆ ಮಾಡಲಾಗಿದೆ. ಉಮರ್ ಫಾರೂಕ್ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡ ತಲವಾರಿನಿಂದ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ಉಮರ್ ಫಾರೂಕ್ ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.