ವಿಟ್ಲ ಕಸ್ಬಾ ಎಂಬಲ್ಲಿ ಪ್ಲಾಸ್ಟಿಕ್ ಚೀಲವೊಂದರಲ್ಲಿ 12 ಕೆ.ಜಿ. ತೂಕದ ರಕ್ತಚಂದನ ಮರದ ತುಂಡನ್ನು ಸಾಗಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಸವಣೂರು ಗ್ರಾಮ ನಿವಾಸಿ ಅಬ್ಬು ಚಾಪಳ್ಳ ಯಾನೆ ಉಮ್ಮರ್ ಫಾರೂಕ್ ಎಂಬ ಆರೋಪಿ ಯಾವುದೇ ಸಾಗಾಟ ಪರವಾನಗಿ ಹೊಂದಿರದ 24,200 ರೂ ಮೌಲ್ಯದ 12 ಕೆ.ಜಿ. ತೂಕದ ರಕ್ತಚಂದನದ ತುಂಡನ್ನು ಹೊಂದಿದ್ದು, ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಸಯ್ಯದ್ ಎಂಬಾತನಿಂದ ರಕ್ತಚಂದನ ಪಡೆದಿರುವುದಾಗಿ ತಿಳಿಸಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…