ಫರಂಗಿಪೇಟೆ

ಸೆ.9ರಂದು ಮಾಣೂರಿನಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನ

 

ಜಾಹೀರಾತು

ಬಂಟ್ವಾಳ: ತುಂಬೆ ಗ್ರಾಮದ ಮಾಣೂರು ಎಂಬಲ್ಲಿ ಹಿದಾಯ ಫೌಂಡೇಶನ್, ಎಂ. ಫ್ರೆಂಡ್ಸ್ ಮಂಗಳೂರು ಮತ್ತು ಇರ್ಷಾದುಲ್ ಇಸ್ಲಾಮ್ ಮದರಸ ಮಾಣೂರು ಇದರ ಅಹಯೋಗದೊಂದಿಗೆ ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನವು ಸೆ. 9 ರಂದು ಮಾಣೂರು ಇರ್ಷಾದುಲ್ ಇಸ್ಲಾಂ ಮದರಸದಲ್ಲಿ ಬೆಳಗ್ಗೆ 8:00 ರಿಂದ ಸಂಜೆ 4:00 ರತನಕ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಹಿದಾಯ ಫೌಂಡೇಶನ್ ಮತ್ತು ಎಂ. ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಉದ್ಘಾಟಿಸಲಿದ್ದಾರೆ. ನಂತರ ನಿಗದಿಪಡಿಸಿದ ದಿನಾಂಕದಂದು ಆಯುಷ್ಮಾನ್ ಕಾರ್ಡ್ ವಿತರಿಸಲಿದೆ.
ಸೂಚನೆ: ನೊಂದಣಿಗೆ ಆಧಾರ್ ಮತ್ತು ರೇಶನ್ ಕಾರ್ಡ್ ತರತಕ್ಕದ್ದು. ಬೆಳಗ್ಗೆ 8:00 ಗಂಟೆಯಿಂದ ಟೋಕನ್ ನೀಡಲಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ, ಕುಟುಂಬದ ಎಲ್ಲಾ ಸದಸ್ಯರು ಪ್ರತ್ಯೇಕ-ಪ್ರತ್ಯೇಕ ನೊಂದಾವಣೆ ಮಾಡಿಕೊಳ್ಳತಕ್ಕದ್ದು. ಐದು ವರ್ಷದ ಕೆಳಗಿನವರಿಗೆ ನೊಂದಾವಣಿ ಅಗತ್ಯವಿರುವುದಿಲ್ಲ. ಮಾಸ್ಕ್ ಖಡ್ಡಾಯ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಿ.ಪಿ.ಎಲ್ ಕಾರ್ಡ್‍ದಾರರಿಗೆ ವಾರ್ಷಿಕ ರೂ. 5 ಲಕ್ಷದ ತನಕ ಎ.ಪಿ.ಎಲ್ ಕಾರ್ಡ್‍ದಾರರಿಗೆ ವಾರ್ಷಿಕ ಕುಟುಂಬಕ್ಕೆ 1.50 ಲಕ್ಷ ತನಕ ಚಿಕಿತ್ಸೆ ಉಚಿತವಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಇರ್ಷಾದುಲ್ ಇಸ್ಲಾಂ ಮದರಸ ಅಧ್ಯಕ್ಷ ಎಂ.ಎಚ್.ಹಸನಬ್ಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.