ಬಂಟ್ವಾಳ

5 ಲಕ್ಷದೊಳಗಿನ ಕಾಮಗಾರಿ ತುಂಡುಗುತ್ತಿಗೆ: ತಾಪಂ ಸದಸ್ಯ ಪ್ರಭು ಮನವಿ

ಜಾಹೀರಾತು

5  ಲಕ್ಷ ರೂ ವರೆಗಿನ  ಎಲ್ಲಾ ವಿಧದ ಕಾಮಗಾರಿ ಗಳನ್ನು ತುಂಡು ಗುತ್ತಿಗೆಯ ಮೂಲಕ ನಿರ್ವಹಿಸಲು ಸರಕಾರದ ಅದೇಶ ಹೊರಡಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ರಾಜೇಶ್ ನಾಯ್ಕ್ ಅವರಿಗೆ ತಾಪಂ ಸದಸ್ಯ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ  ಅನುಷ್ಠಾನ ಗೊಳ್ಳುತ್ತಿರುವ ಶಾಸಕರ, ಲೋಕಸಭಾ ಸದಸ್ಯರ, ಜಿಲ್ಲಾ ಪಂಚಾಯತ್,  ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಗಳಲ್ಲಿನ  ವಿವಿಧ ಯೋಜನೆಗಳಲ್ಲಿ ರೂ. 5  ಲಕ್ಸ ವರೆಗಿನ ಕಾಮಗಾರಿಗಳನ್ನು ತುಂಡು ಗುತ್ತಿಗೆ  ಕರಾರಿನಂತೆ  ನಿರ್ವಹಿಸಲಾಗುತ್ತಿದ್ದು ಜಿಲ್ಲಾ ಪಂಚಾಯತ್ , ತಾ.ಪಂಚಾಯತ್ ಗ್ರಾಮ ಪಂಚಾಯತ್  ಗಳಲ್ಲಿ ಸಣ್ಣ ಸಣ್ಣ ಮೊತ್ತದ ಕಾಮಗಾರಿ ಗಳು ತುಂಡು ಗುತ್ತಿಗೆ  ಆಧಾರದಲ್ಲಿ ಯಶಸ್ವಿಯಾಗಿ ಶೀಘ್ರವಾಗಿ ಪ್ರಗತಿ ಕಾಣಲು ಸಾದ್ಯವಾಗುತ್ತಿತ್ತು. ಈ  ಬಗ್ಗೆ ಕಳೆದ ಬಾರಿ ಸರಕಾರ ತುಂಡು ಗುತ್ತಿಗೆಯನ್ನು ರದ್ದುಪಡಿಸಿತ್ತು.ಈ ಬಗ್ಗೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳ ಒತ್ತಡ, ಒತ್ತಾಯದ ಮೇರೆಗೆ ಶಾಸಕರು, ಸಚಿವರು ಸೇರಿದಂತೆ ಇತರರು ಸರಕಾರದ ಮೇಲೆ ಒತ್ತಡ ಹೇರಿ ಈ ಸಂಬಂಧಿಸಿದ ಅದೇಶವನ್ನು ಹಿಂಪಡೆಯಲಾಯಿತು. 2020ರ ಜುಲೈ 17ರವರೆಗೆ ತುಂಡು ಗುತ್ತಿಗೆ ಮುಂದುವರಿಸುವ ಅದೇಶ ಹೊರಡಿಸಲಾಗಿತ್ತು. ಆದರೆ ಈ ಅದೇಶ ಬರುವ ಹೊತ್ತಿನಲ್ಲಿ ಕೊರೊನಾ ಮಹಾಮಾರಿ ರೋಗದಿಂದಾಗಿ ಕಳೆದ ಮಾರ್ಚ ತಿಂಗಳನಿಂದ ಇವರೆಗೆ  ತುಂಡು ಗುತ್ತಿಗೆ ಸಂಬಂಧಿಸಿದ ಯಾವುದೇ ಕಾಮಗಾರಿ ಕೆಲಸ ಕಾರ್ಯಗಳು ಸ್ಥಗಿತ  ಗೊಂಡಿರುವ ಹಿನ್ನೆಲೆಯಲ್ಲಿ  ಹಾಗೂ ಜಿಲ್ಲಾ ಪಂಚಾಯತ, ತಾ.ಪಂಚಾಯತ್, ಗ್ರಾಮ ಪಂಚಾಯತ್  ಗಳ 15 ನೇ ಹಣಕಾಸು ಯೋಜನೆ ಸೇರಿದಂತೆ ಇತರ ಯೋಜನೆ ಅನುದಾನ ಗಳು ಶೀಘ್ರವಾಗಿ ಅನುಷ್ಠಾನ  ಗೊಳ್ಳುವ ಹಿತದೃಷ್ಟಿಯಿಂದ ಈ ನಿಲುವು ಕೈಗೊಳ್ಳಬೇಕು ಎಂದು ಪ್ರಭು ಒತ್ತಾಯಿಸಿದ್ದಾರೆ.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

5 hours ago