ಬಂಟ್ವಾಳ: ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಆ. 25ರ ಮಂಗಳವಾರ ಬಂಟ್ವಾಳ ತಾಲೂಕಿನ ಎಲ್ಲ ಭಕ್ತ ಭಾಂದವರಿಂದ ಕ್ಷೇತ್ರ ಸಂದರ್ಶನ ನಡೆಯುವುದು ಎಂದು ಶ್ರೀರಾಮಕ್ಷೇತ್ರದ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಹೇಳಿದ್ದಾರೆ.
ಬೆಳಗ್ಗೆ 9ಗಂಟೆಗೆ ಬಿ. ಸಿ. ರೋಡ್ ಗಾಣದಪಡ್ಪು ನಾರಾಯಣ ಗುರು ಮಂದಿರ ವಠಾರದಲ್ಲಿ ಸೇರಿ 10 ಗಂಟೆಗೆ ಅವರವರ ವಾಹನದಲ್ಲಿ ಹೊರಟು ಕ್ಷೇತ್ರಕ್ಕೆ ಹೋಗಿ ಪಾದ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಬರುವ ಕಾರ್ಯಕ್ರಮ ಇರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)