ಬಂಟ್ವಾಳ

ಕೈಕುಂಜ ರುದ್ರಭೂಮಿಗೆ ಹೊಸರೂಪ ನೀಡಲು ಯೋಜನೆ: ಪಾಲನಾ ಮಂಡಳಿ ರಚನೆ

ಜಾಹೀರಾತು

ಬಿ.ಸಿ.ರೋಡಿನ ಕೈಕುಂಜೆ ಹಿಂದು ರುದ್ರಭೂಮಿಯನ್ನು ಅಭಿವೃದ್ಧಿಪಡಿಸಲು ಹಲವು ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದ್ದು,  ಪ್ರಥಮ ಹಂತವಾಗಿ ಪಾಲನಾ ಸಮಿತಿ ರಚನೆಯಾಗಿದೆ.

ರುದ್ರಭೂಮಿಗೆ ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಅಭಿವೃದ್ಧಿಪಡಿಸುವ ಕುರಿತು ಸೂಚನೆಗಳನ್ನು ನೀಡಿದ್ದರು. ಪೊದೆ, ಗಿಡಗಂಟಿಗಳಿಂದ ಕೂಡಿದ್ದ ಸ್ಮಶಾನಕ್ಕೆ ಹೊಸರೂಪ ನೀಡುವ ಕುರಿತು ಅವರು ಹೇಳಿದ್ದರು. ಇದರನ್ವಯ ಹೊಸ ಪಾಲನಾ ಸಮಿತಿ ರಚನೆಯಾಗಿದೆ. ಅಧ್ಯಕ್ಷರಾಗಿ ಕೇಶವ ದೈಪಲ, ಕಾರ್ಯದರ್ಶಿಯಾಗಿ ಮಚ್ಚೇಂದ್ರ ಸಾಲಿಯಾನ್ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಬಿ.ರಾಮಚಂದ್ರರಾವ್ ಕೈಕುಂಜೆ, ಲಕ್ಷ್ಮಣ ಗೌಡ ಭಂಡಾರಿಬೆಟ್ಟು, ಉಮೇಶ್ ನಾಯಕ್ ಗಾಂದೋಡಿ, ಗಣೇಶ್ ದಾಸ್ ಪಲ್ಲಮಜಲು, ಭಾಸ್ಕರ ಕುಲಾಲ್ ಕಾಮಾಜೆ ಮತ್ತು ಚರಣ್ ಜುಮಾದಿಗುಡ್ಡೆ ಆಯ್ಕೆಗೊಂಡರು. ಕೋಶಾಧಿಕಾರಿಯಾಗಿ ಸುರೇಶ್ ಸಾಲಿಯಾನ್ ಚಿಕ್ಕಯ್ಯಮಠ ಹಾಗೂ ಜತೆಕಾರ್ಯದರ್ಶಿಯಾಗಿ ಹರಿಪ್ರಸಾದ್ ಭಂಡಾರಿಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಸಂಚಾಲಕರಾಗಿ ಪದ್ಮನಾಭ ಚಿಕ್ಕಯಮಠ, ಸಹಸಂಚಾಲಕರಾಗಿ ನಾರಾಯಣ ಮೂಲ್ಯ ಭಂಡಾರಿಬೆಟ್ಟು, ಭಾಸ್ಕರ ಟೈಲರ್, ಮುರಳೀಕೃಷ್ಣ ಕೊಡಂಗೆ, ಲೋಕೇಶ್ ಕುಲಾಲ್ ಮಠ, ಶಶಿಧರ ಕೈಕುಂಜೆ, ಅಶ್ವತ್ಥ ಅಲೆತ್ತೂರು, ಸದಾಶಿವ, ಸತೀಶ್ ಶೆಟ್ಟಿ ಮೊಡಂಕಾಪು, ಪ್ರದೀಪ್ ಬಿ.ಸಿ.ರೋಡ್, ಹರೀಶ್ ಚಿಕ್ಕಯ್ಯಮಠ, ಸುಧಾಕರ ಸಾಲಿಯಾನ್ ಸಂಚಯಗಿರಿ, ಶಿವಶಂಕರ ರಾವ್ ಅಲೆತ್ತೂರು, ಭೋಜ ಸಾಲಿಯಾನ್ ಕೈಕಂಬ ಮತ್ತು ವಿಶ್ವನಾಥ ಬಿ. ಆಯ್ಕೆಗೊಂಡರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.