ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ತಾಲೂಕಿನ ಕಡೇಶಿವಾಲಯ ಗ್ರಾಮದ ಪೆರ್ಲಾಪು ಎಂಬಲ್ಲಿಯ ಮಹಿಳಾ ಹಾಲು ಉತ್ಪಾದಕರ ಸಂಘದ 130 ಸದಸ್ಯರಿಗೆ 260 ಸಸಿಗಳನ್ನು ಕ್ಲಬ್ ಅಧ್ಯಕ್ಷ ಪದ್ಮನಾಭ ರೈ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು. ಕಾರ್ಯದರ್ಶಿ ಕಿಶೋರ್, ಸುಜಾತಾ ಪಿ ರೈ, ಸುಂದರ್ ರೈ, ಸೇಸಪ್ಪ ಮೂಲ್ಯ ಚಂದ್ರಶೇಖರ್ ಪೂಜಾರಿ, ಆಲ್ಬರ್ಟ್ ಮೆನೆಜಸ್, ನಾರಾಯಣ ಸಿ ಪೆರ್ನೆ, ಜ್ಯೋತಿಂದ್ರ ಶೆಟ್ಟಿ, ಸುಕುಮಾರ್ ಬಂಟ್ವಾಳ್, ದಿವಾಕರ್ ಶೆಟ್ಟಿ, ಉಮೇಶ್ ನೆಲ್ಲಿಗುಡ್ಡೆ, ಚಿತ್ತರಂಜನ್ ಶೆಟ್ಟಿ, ಕೇಶವ ನಾಯ್ಕ್, ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಪುಷ್ಪಲತಾ , ರೋಟರಿ ಗ್ರಾಮೀಣ ದಳದ ಮಾಜಿ ಅಧ್ಯಕ್ಷ ಪ್ರಶಾಂತ್ ಪೆರ್ಲಾಪು , ಹಾಜರಿದ್ದರು. ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಗೀತಾ ವಂದಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…