ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಮಾಣಿ ವಲಯದ ವತಿಯಿಂದ ಕೊಡಾಜೆ ಜಂಕ್ಷಣ್ ನಲ್ಲಿ ದ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಲ್ಲಡ್ಕ ಡಿವಿಜನ್ ಕಾರ್ಯದರ್ಶಿಯಾದ ಲತೀಫ್ ಕೊಡಾಜೆ ದ್ವಜಾರೋಹಣಗೈದರು. ವಲಯ ಕಾರ್ಯದರ್ಶಿ ಸಮಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಡಾಜೆ ಯುನಿಟ್ ಅಧ್ಯಕ್ಷರಾದ ಸಿದ್ದೀಖ್, ಸೂರಿಕುಮೇರು ಯುನಿಟ್ ಕಾರ್ಯದರ್ಶಿಯಾದ ಇರ್ಫಾನ್ ಮೊದಲಾದವರು ಉಪಸ್ಥಿತರಿದ್ದರು. ಸಿದ್ದೀಖ್ ಸೂರಿಕುಮೇರು ಕಾರ್ಯಕ್ರಮವನ್ನು ನಿರೂಪಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)