ಜಿಲ್ಲಾ ಸುದ್ದಿ

ವಿಶ್ವ ಆನೆ ದಿನ: ಚಿತ್ರ ಬಿಡಿಸುವ ಸ್ಪರ್ಧೆ- ಬಹುಮಾನ ಪ್ರಕಟ

ಜಾಹೀರಾತು

2020ನೇ ಆಗಸ್ಟ್ 12 ರ “ವಿಶ್ವ ಆನೆ ದಿನ” ಪ್ರಯುಕ್ತ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತದ ವತಿಯಿಂದ ಪ್ರಕೃತಿಯಲ್ಲಿ ಆನೆಯ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಬಗ್ಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 15 ವರ್ಷದ ಒಳಗಿನ ಮಕ್ಕಳಿಂದ ಆನೆಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿದ್ದು, ಪ್ರವೇಶಾರ್ಥಿಗಳನ್ನು ಸಾಮಾಜಿಕ ಜಾಲತಾಣದ ಮುಖಾಂತರ ಆಹ್ವಾನಿಸಲಾಗಿತ್ತು.  ಸ್ಪರ್ಧೆಗೆ ಒಟ್ಟು 1496 ಚಿತ್ರಗಳು ಬಂದಿದ್ದು, ಅವುಗಳಲ್ಲಿ ಅಂತಿಮವಾಗಿ ಎರಡು ವರ್ಗಗಳಲ್ಲಿ ಆಯ್ಕೆ ಮಾಡಿ ಬಹುಮಾನವನ್ನು ನೀಡಲಾಯಿತು.

ಒಂದನೇ ವರ್ಗದಲ್ಲಿ 10 ವರ್ಷದ ಒಳಗಿನವರು: ಪ್ರಥಮ  – ಸಾತ್ವಿಕ್ ಕೆ. ಆಚಾರ್ಯ, ಕಾರ್ಕಳ, ದ್ವಿತೀಯ -ಧೃತಿ ಎಸ್., ಉಡುಪಿ, ತೃತೀಯ -ನಿಲಿಷ್ಕಾ ಕೆ., ಪುತ್ತೂರು.

ಎರಡನೇ ವರ್ಗದಲ್ಲಿ 15 ವರ್ಷದ ಒಳಗಿನವರು: ಪ್ರಥಮ  -ಕೆ. ಪ್ರತಿಷ್ಠಾ ಶೇಟ್, ಉಡುಪಿ, ದ್ವಿತೀಯ -ಶರಣ್ಯ ಭಟ್, ಬ್ರಹ್ಮಾವರ, ತೃತೀಯ -ಮೋಕ್ಷಿತ್ ಸುರೇಶ್, ಮಂಗಳೂರು ಮತ್ತು ಹಾಮಿದ ವಫಾ ಯು., ಪುತ್ತೂರು .

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.