ಪುಂಜಾಲಕಟ್ಟೆ

ಬಳಸಿದ ಮಾಸ್ಕ್, ಸ್ಯಾನಿಟರಿ ತ್ಯಾಜ್ಯಗಳ ದಹನ ವ್ಯವಸ್ಥೆಗೆ ಚಾಲನೆ

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸೆಲ್ಕೋ ಫೌಂಡೇಶನ್ ಮತ್ತು ಕೆದ್ದಲಿಕೆ ಶಾಲೆ  ಮಾದರಿ ಗ್ರಾಮ ಯೋಜನೆಯಡಿಲ್ಲಿ ಶಾಲೆಯಲ್ಲಿ ಸ್ಯಾನಿಟರಿ ಪ್ಯಾಡ್, ಬಳಸಿದ ಮಾಸ್ಕ್ ದಹನ ಘಟಕಕ್ಕೆ ಚಾಲನೆ ನೀಡಲಾಯಿತು.

ಜಾಹೀರಾತು

ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್ ಮಾತನಾಡಿ ಈ ಘಟಕದಿಂದ ಸ್ಯಾನಿಟರಿ ಪ್ಯಾಡ್, ಮೆಡಿಕಲ್ ತ್ಯಾಜ, ಬಳಸಿದ ಮಾಸ್ಕ್ ವಿಲೇವಾರಿ ಮಾಡಲು ತುಂಬಾ ಅನುಕೂಲವಾಗುತ್ತದೆ. ಈ ತ್ಯಾಜ ಹೊರಗೆ ಬಿಸಾಡಿದರೆ ರೋಗ ರುಜಿನ ಬರುವ ಸಾಧ್ಯತೆ ಜಾಸ್ತಿ. ಆದುದರಿಂದ ಬಿವಿಟಿ ಸಂಸ್ಥೆಯ ಈ ತ್ಯಾಜ ದಹನ ಘಟಕದಿಂದ ಬಹಳ ಸುಲಭವಾಗಿ ಅಪಾಯಕಾರಿ ತ್ಯಾಜಗಳ್ಳನ್ನು ವಿಲೇವಾರಿ ಮಾಡಲು ಸಾಧ್ಯ. ಅಲ್ಲದೆ ಇಂಥ ಘಟಕಗಳು ಪ್ರತಿ ಪಂಚಾಯತ್ನಲ್ಲಿ ಮಾಡಿದರೆ ಈ ತ್ಯಾಜದ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭ ರಾಷ್ಟ್ರಪ್ರಶಸ್ತಿ ವಿಜೇತ ಕೆದ್ದಲಿಕೆ ಶಾಲಾ ನಿವೃತ್ತ ಮುಖ್ಯೋಪಾಧ್ಯಯರಾದ ರಮೇಶ್ ನಾಯಕ್ ರಾಯಿ, ಶಾಲಾ ಮುಖ್ಯೋಪಾಧ್ಯಾರಾದ ಕುಮಾರ್. ಎಚ್, ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಲ್ಕಟ್ಟೆ, ಪಂಚಾಯತ್ ಸದಸ್ಯರಾದ ಮೋಹನ್ ಆಚಾರ್ಯ, ಸತೀಶ್ ಪದಂತರಬೆಟ್ಟು, ಬಿವಿಟಿ ಯೋಜನಾಧಿಕಾರಿಯಾದ ಜೀವನ್, ಶಾಲಾ ಶಿಕ್ಷಕರು, ರೈತರು, ಆಶಾ ಕಾರ್ಯಕರ್ತರು ಭಾಗವಹಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.