ಪ್ರಮುಖ ಸುದ್ದಿಗಳು

ಕನ್ನಡದ ಪ್ರಸಿದ್ಧ ಪೋಷಕನಟ ಹುಲಿವಾನ್ ಗಂಗಾಧರಯ್ಯ ನಿಧನ

ಕನ್ನಡದ ಪ್ರಸಿದ್ಧ ಪೋಷಕನಟ, ರಂಗಭೂಮಿ ಕಲಾವಿದರೂ ಆಗಿದ್ದ ಹುಲಿವಾನ್ ಗಂಗಾಧರಯ್ಯ (70) ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಗಂಗಾಧರಯ್ಯ ಅವರು ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಪೋಷಕರ ನಟರಾಗಿ ಅಭಿನಯಿಸಿದ್ದಾರೆ.

ಜಾಹೀರಾತು

2016ರಲ್ಲಿ ಬಿಡುಗಡೆಯಾಗಿದ್ದ ‘ಕರ್ಮ’ ಸಿನಿಮಾ ಹುಲಿವಾನ್ ಗಂಗಾಧರಯ್ಯ ನಟಿಸಿದ ಕೊನೆಯ ಸಿನಿಮಾ. ಗಂಗಾಧರಯ್ಯ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದು, ಹಿರಿಯ ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಹೀಗೆ ಹೇಳಿದ್ದಾರೆ.

ಗೆಳೆಯ ಹಾಗೂ ಅದ್ಭುತ ಕಲಾವಿದ ಹುಲಿವಾನ್ ಗಂಗಾಧರಯ್ಯ ನಿಧನ ಹೊಂದಿರುವುದು ತೀವ್ರ ನೋವು,ಸಂಕಟಗಳನ್ನು ತಂದಿದೆ.ನನ್ನ ಆಸ್ಫೋಟ ನಾಟಕದಲ್ಲಿ ಮುಖ್ಯ ಪಾತ್ರದ ಸಮಾನಾಂತರ ಪಾತ್ರ ಡ್ರೈವರ್ ಪಾತ್ರ ಇವರು ಮಾಡುತ್ತಿದ್ದ ರೀತಿ ಅವರಿಗೆ ಮಾತ್ರವಲ್ಲ ನಾಟಕಕ್ಕೂ ಜನಪ್ರಿಯತೆ ಹೆಚ್ಚಿಸಿತ್ತು. ಜಾರ್ಜ್ ಫರ್ನಾಂಡಿಸ್ ಈ ನಾಟಕವನ್ನು ನೋಡಿದಾಗ ಅವರು ಎಲ್ಲರ ಅಭಿನಯಕ್ಕಿಂತ ಹೆಚ್ಚು ಇಷ್ಟ ಪಟ್ಟಿದ್ದು ಹುಲಿವಾನ್ ಅಭಿನಯವನ್ನು. ನನ್ನ ‘ಮುಕ್ತ ಮುಕ್ತ’ ದಲ್ಲಿ ಮುಖ್ಯಮಂತ್ರಿ ರಾಜಾನಂದಸ್ವಾಮಿಯ ಪಾತ್ರ ವನ್ನು ಇವರು ವಹಿಸುತ್ತಿದ್ದ ರೀತಿ ಅನನ್ಯ ವಾಗಿತ್ತು.ಸಂವಾದಗಳಿಗೆ ಅತಿ ಹೆಚ್ಚು ಮೆಚ್ಚುಗೆ ಯ ಚಪ್ಪಾಳೆ ಇವರಿಗೆ ಸಿಗುತ್ತಿತ್ತು ನೂರ ಇಪ್ಪತ್ತೇಳು ಪ್ರದರ್ಶನ ಗಳನ್ನು ನಾಟಕ ಕಂಡಾಗ, ಮೂರೂವರೆ ವರ್ಷ ಒಂದು ಧಾರಾವಾಹಿ ಯಲ್ಲಿ ಒಟ್ಟಿಗೇ ಕೆಲಸ ಮಾಡಿದಾಗ ಹೆಚ್ಚು ದಿನ ಜತೆಯಲ್ಲಿ ದ್ದು ಹತ್ತಿರದ ಗೆಳೆಯರಾಗಿದ್ದೆವು.ಪರಸ್ಪರ ಕಷ್ಟ,ಸುಖಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾಗ ಗಟ್ಟಿಯಾದ ಆತ್ಮೀಯತೆ ಶುರುವಾಗುತ್ತದೆ. ಹಾಗೆ ಆತ್ಮೀಯರಾದವರು ಹುಲಿವಾನ್. ಆಧುನಿಕ ಕನ್ನಡ ರಂಗಭೂಮಿ ಯ ಚಳುವಳಿಯಲ್ಲಿ ಅತಿ ಮುಖ್ಯರೊಬ್ಬ ರಾಗಿದ್ದ ನನ್ನ ಆತ್ಮೀಯ ಗುರುಗಳ ರೀತಿಯಲ್ಲಿದ್ದ ಆರ್.ನಾಗೇಶ್ ತಮ್ಮ ಎಲ್ಲ ನಾಟಕ ಗಳಲ್ಲಿಯೂ ಹುಲಿವಾನ್ ರನ್ನು ಹಾಕಿಕೊಳ್ಳುತ್ತಿದ್ದರು.ಅಷ್ಟು ನಂಬಿಕೆ ಅವರ ಅಭಿನಯದಲ್ಲಿ. ನಂತರದ ದಿನಗಳಲ್ಲಿ ಅವರು ಪೂರ್ಣ ಪ್ರಮಾಣದ ಕೃಷಿಯಲ್ಲಿ ಅವರ ಊರಿನಲ್ಲಿ ತೊಡಗಿಕೊಂಡು, ರೈತಸಂಘದಲ್ಲಿ ತೊಡಗಿಕೊಂಡರು ಎಂದು ಸೀತಾರಾಮ್ ನೆನಪಿಸಿಕೊಂಡಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts