ಪ್ರಮುಖ ಸುದ್ದಿಗಳು

COVID UPDATE: ದಕ್ಷಿಣ ಕನ್ನಡ ಜಿಲ್ಲೆ: ವಾರಕ್ಕೆ ಸಾವಿರ ಮಂದಿಗೆ ಕೊರೊನಾ ಸೋಂಕು

Harish Mambady,  www.bantwalnews.com

ದಿನಾಂಕಜುಲೈ 4, 2020ವರೆಗೆ

ಜಾಹೀರಾತು

ಕೊರೊನಾ ಹಿನ್ನೆಲೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ ನೀಡಿದವರ ಸಂಖ್ಯೆ: 15,270. ಪಾಸಿಟಿವ್ 1095.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 75. ಒಟ್ಟು ಸೋಂಕಿತರ ಸಂಖ್ಯೆ 1095. ಚಿಕಿತ್ಸೆ ಪಡೆಯುತ್ತಿರುವವರು 557. ಗುಣಮುಖರಾಗಿ ಹೊರಗೆ ಬಂದವರು 516.

ದಿನಾಂಕಜುಲೈ 11, 2020ವರೆಗೆ

ದಕ್ಷಿಣ ಕನ್ನಡದಲ್ಲಿ ಒಟ್ಟು ಪರೀಕ್ಷೆ ನೀಡಿದವರು 22,832. ಪಾಸಿಟಿವ್ 2,034. ಇಂದು ಸೋಂಕಿತರು 186. ಚಿಕಿತ್ಸೆ ಪಡೆಯುತ್ತಿರುವವರು 1211. ಚಿಕಿತ್ಸೆ ಬಳಿಕ ಮನೆಗೆ ತೆರಳಿದವರು 782.   

ದಿನಾಂಕ – ಜುಲೈ 18, 2020ವರೆಗೆ

ದಕ್ಷಿಣ ಕನ್ನಡದಲ್ಲಿ ಒಟ್ಟು ಪರೀಕ್ಷೆ ನೀಡಿದವರು 26,368. ಪಾಸಿಟಿವ್ 3.311. ಇಂದು ಸೋಂಕಿತರು 237. ಚಿಕಿತ್ಸೆ ಬಳಿಕ ಮನೆಗೆ ತೆರಳಿದವರು 1387.  ಚಿಕಿತ್ಸೆ ಪಡೆಯುತ್ತಿರುವವರು 1848. ಗುಣಮುಖರಾಗಿ ಹೊರಗೆ ಬಂದವರು 1387

ಜುಲೈ 4ರಿಂದ ಜುಲೈ 11ರವರೆಗೆ ಹೀಗಿತ್ತು.

ಒಟ್ಟು 7562 ಮಂದಿಯ ಗಂಟಲು ದ್ರವ ಮಾದರಿಯ ತಪಾಸಣೆ ನಡೆದಿದೆ. ಅವರ ಪೈಕಿ 939 ಮಂದಿಗೆ ಸೋಂಕು ದೃಢಪಟ್ಟಿದೆ. 266 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಜುಲೈ 11ರಿಂದ ಜುಲೈ 18ರವರೆಗೆ ಹೀಗಿತ್ತು

ಒಟ್ಟು 3536 ಮಂದಿಯ ಗಂಟಲು ದ್ರವ ಮಾದರಿಯ ತಪಾಸಣೆ ನಡೆದಿದೆ. ಅವರ ಪೈಕಿ 1,277 ಮಂದಿಗೆ ಸೋಂಕು ದೃಢಪಟ್ಟಿದೆ. 605 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜುಲೈ 4ರ ಶನಿವಾರ ಸೋಂಕಿತರ ಒಟ್ಟು ಸಂಖ್ಯೆ 1 ಸಾವಿರ ದಾಟಿದರೆ, ಕಳೆದ ಶನಿವಾರ 2 ಸಾವಿರ ದಾಟಿತ್ತು. ಈ ಶನಿವಾರ 3 ಸಾವಿರ ದಾಟಿದೆ. ಜುಲೈ 4ಶನಿವಾರ ಹೊಸ ಪ್ರಕರಣಗಳು 75 ಇದ್ದರೆ ಕಳೆದ ಶನಿವಾರ ಹೊಸ ಪ್ರಕರಣಗಳು 186. ಈ ಶನಿವಾರ 237 ಮಂದಿಗೆ ಸೋಂಕು ದೃಢಪಟ್ಟಿದೆ ಜುಲೈ 4ರಿಂದ 11ರ ಅವಧಿಯಲ್ಲಿ 7562 ಮಂದಿಯ ಗಂಟಲು ದ್ರವ ಮಾದರಿ ತಪಾಸಣೆ ನಡೆಸಿದಾಗ ಒಟ್ಟು 939 ಮಂದಿಗೆ ಸೋಂಕು ತಗಲಿದೆ, ಜುಲೈ 11ರಿಂದ 18ರವರೆಗೆ ಒಟ್ಟು 3536 ಮಂದಿಯ ಗಂಟಲು ದ್ರವ ಮಾದರಿ ತಪಾಸಣೆ ನಡೆಸಿದ್ದರೂ 1,277 ಮಂದಿಗೆ ಸೋಂಕು ತಗಲಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.