ಪ್ರಮುಖ ಸುದ್ದಿಗಳು

COVID UPDATE: ಕರ್ನಾಟಕದಲ್ಲಿ 16,514 ತಲುಪಿದ ಸಂಖ್ಯೆ, ಇಂದು ಒಂದೇ ದಿನ 1272 ಪ್ರಕರಣ, 7 ಸಾವು

ಜಾಹೀರಾತು

ಚಿಕಿತ್ಸೆ ಪಡೆಯುತ್ತಿರುವವರು 8194, ಗುಣಮುಖರಾದವರು 8063. ಆಸ್ಪತ್ರೆಯಿಂದ ಇಂದು ಬಿಡುಗಡೆ ಹೊಂದಿದವರು 145, ಇಂದು ಹೊಸದಾಗಿ ಸೋಂಕು ದೃಢಪಟ್ಟು ಆಸ್ಪತ್ರೆಗೆ ಸೇರಿದವರು 1272. ಇಂದು ಮೃತಪಟ್ಟವರು 7, ಒಟ್ಟು ಮೃತಪಟ್ಟವರು 253. ಒಟ್ಟು ಖಚಿತಗೊಂಡ ಪ್ರಕರಣಗಳು 16514, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 292.

ಇದು ಜುಲೈ 1, ಬುಧವಾರ ರಾಜ್ಯದ ಹೆಲ್ತ್ ಬುಲೆಟಿನ್ ಒದಗಿಸಿದ ಮಾಹಿತಿ.

ಬೆಂಗಳೂರು ನಗರವೊಂದರಲ್ಲಿಯೇ ಒಟ್ಟು 4649 ಸಕ್ರಿಯ ಪ್ರಕರಣಗಳಿದ್ದು, ಅವುಗಳ ಪೈಕಿ ಇಂದು ಹೊಸದಾಗಿ 735 ಪ್ರಕರಣಗಳು ಸೇರಿವೆ. ಬೆಂಗಳೂರು ನಗರದಲ್ಲಿ ಒಟ್ಟು ಸೋಂಕಿತರೇ 5290, ಇವುಗಳ ಪೈಕಿ ಬಿಡುಗಡೆಯಾದವರು 543. ದಕ್ಷಿಣ ಕನ್ನಡದಲ್ಲಿ ಇಂದು 84, ಬಳ್ಳಾರಿ 85, ಉಡುಪಿ 22 ಪ್ರಕರಣಗಳನ್ನು ಇಂದು ಹೊಂದಿವೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.