ಬಂಟ್ವಾಳ: ಗ್ರಾಮಾಂತರ ಪ್ರದೇಶಗಳಿಗೆ ತಾತ್ಕಾಲಿಕವಾಗಿ ಸರ್ಕಾರಿ ಬಸ್ ಒದಗಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶನಿವಾರ ಬಿ.ಸಿ.ರೋಡಿನ ತಮ್ಮ ಕಚೇರಿಯಲ್ಲಿ ಬಸ್ ಸಂಚಾರ ಕುರಿತು ಬಿ.ಸಿ.ರೋಡು ಘಟಕದ ಕೆಎಸ್ಆರ್ಟಿಸಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಸಭೆಯಲ್ಲಿ ಬಿ.ಸಿ.ರೋಡು ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕ ಶ್ರೀಶ ಭಟ್, ಬಿ.ಸಿ.ರೋಡು ಡಿಪೋ ಟ್ರಾಫಿಕ್ ಇನ್ಸ್ಪೆಕ್ಟರ್ ಗಣೇಶ್ ಪೈ, ಆಡಳಿತ ಸಹಾಯಕ ರಮೇಶ್ ಶೆಟ್ಟಿ ವಾಮದಪದವು, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಉಪಸ್ಥಿತರಿದ್ದರು. ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ಘಟಕದಿಂದ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗೆ ಶಾಸಕರ ಸೂಚನೆ ಕುರಿತು ಪತ್ರ ಬರೆಯಲಾಗಿದ್ದು, ಬಸ್ ಸೌಕರ್ಯ ಒದಗಿಸುವಂತೆ ತಿಳಿಸಲಾಗಿದೆ. ಘಟಕ ವ್ಯಾಪ್ತಿಯ ಬಿ.ಸಿ.ರೋಡು-ಪೊಳಲಿ-ಕೈಕಂಬ, ಬಿ.ಸಿ.ರೋಡು-ವಾಮದಪದವು, ಬಿ.ಸಿ.ರೋಡು-ಕಕ್ಯಪದವು, ಬಿ.ಸಿ.ರೋಡು-ಸರಪಾಡಿ, ಬಿ.ಸಿ.ರೋಡು-ಮೂಲರಪಟ್ಣ, ಬಿ.ಸಿ.ರೋಡು-ಕೊಳತ್ತಮಜಲು ಮಾರ್ಗಗಳಲ್ಲಿ ಮೇ 25ರಂದು ಬಸ್ ಸಂಚಾರ ಪ್ರಾರಂಭಿಸಲು ಶಾಸಕರು ನಿರ್ದೇಶನ ನೀಡಿರುತ್ತಾರೆ. ಇದರಲ್ಲಿ ಬಿ.ಸಿ.ರೋಡು-ಪೊಳಲಿ-ಕೈಕಂಬ ಖಾಸಗಿ ಮಾರ್ಗವಾಗಿದ್ದು, ಹೊಸದಾಗಿ ಸರ್ವೇಕ್ಷಣ ನಡೆಯಬೇಕಿದೆ. ಬಸ್ಸುಗಳ ಓಡಾಟಕ್ಕೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…