ಬಂಟ್ವಾಳ

ಶರತ್ ಮಡಿವಾಳ ಜನ್ಮದಿನಾಚರಣೆ: ಅಶಕ್ತ ರೋಗಿಗಳಿಗೆ ಅಗತ್ಯ ಔಷಧ ವಿತರಣೆ

ಜಾಹೀರಾತು

ದುಷ್ಕರ್ಮಿಗಳಿಂದ ಬಿ.ಸಿ.ರೋಡ್ ನಲ್ಲಿ ಹತ್ಯೆಗೀಡಾಗಿದ್ದ ಶರತ್ ಮಡಿವಾಳ ಅವರ ಜನ್ಮದಿನಾಚರಣೆಯನ್ನು ಬಂಟ್ವಾಳ ತಾಲೂಕಿನ ಸಜೀಪದಲ್ಲಿರುವ ಅವರ ಮನೆಯಲ್ಲಿರುವ ಸ್ಮಾರಕ ಪೀಠಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.

ಈ ವೇಳೆ ಸಜೀಪ ಜನಸೇವಾ ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ, ಬೂಡ ಸದಸ್ಯ ಸಚಿನ್ ಮೆಲ್ಕಾರ್, ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಮುಖಂಡ ಲೋಹಿತ್ ಪಣೋಲಿಬೈಲು, ಅರುಣ್ ಕುಮಾರ್ ಕುಕ್ಕುದಕಟ್ಟೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣೇಶ್ ಕಾರಾಜೆ, ಭಜರಂಗದಳದ ರತನ್ ಬೊಳ್ಳಾಯಿ, ಮನೋಹರ ಕರ್ಕೇರಾ, ಸಂತೋಷ್ ಮರ್ತಾಜೆ, ರಂಜಿತ್ ಪೂಜಾರಿ ಕುದ್ರೆಬೆಟ್ಟು, ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ ಮತ್ತು ಕುಟುಂಬದವರು, ಆರೆಸ್ಸೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.ಬಳಿಕ ‌ಸಜೀಪ ನಾಲ್ಕು ಗ್ರಾಮದಲ್ಲಿ ಕಾಯಿಲೆಯಿಂದ ಬಳಲುತ್ತಿರುವ ಕೆಲವು ಅಶಕ್ತ ಕುಟುಂಬದ ಸದಸ್ಯರಿಗೆ ಯಶವಂತ ದೇರಾಜೆ, ಸಚಿನ್ ಮೆಲ್ಕಾರ್, ಲೋಹಿತ್ ಪಣೋಲಿಬೈಲು ತೃತ್ವದಲ್ಲಿ ಅಗತ್ಯ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.

ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿ ಸೇರಿ

https://chat.whatsapp.com/HEamC5PR5BQ1pNoRgq3yx4

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.