ಬಂಟ್ವಾಳ

ಬಿ.ಸಿ.ರೋಡಿನಿಂದ ಕೂಲಿ ಕಾರ್ಮಿಕರ ಎರಡನೇ ಟ್ರಿಪ್

ತಾಲೂಕಿನ ನಾನಾ ಕಡೆಗಳಲ್ಲಿ ಇದ್ದ ವಲಸೆ ಕೂಲಿ ಕಾರ್ಮಿಕರನ್ನು ಸೋಮವಾರ ಬಿ.ಸಿ.ರೋಡ್ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಅವರವರ ಊರಿಗೆ ಕಳುಹಿಸಕೊಡಲಾಯಿತು.

ಜಾಹೀರಾತು

ಸುಮಾರು 500ರಷ್ಟು ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದು, ಅವರನ್ನು ಪ್ರತ್ಯೇಕ ವಿಭಾಗಗಳನ್ನಾಗಿ ಮಾಡಲಾಗಿತ್ತು. ತಾಪಂ ಇಒ ರಾಜಣ್ಣ ನೇತೃತ್ವದಲ್ಲಿ ಗ್ರಾಪಂಗಳ ಪಿಡಿಒಗಳು ಅವರನ್ನು ಕರೆತರುವ ವ್ಯವಸ್ಥೆ ಕೈಗೊಂಡು, ವೈದ್ಯಕೀಯ ಪರೀಕ್ಷೆಗೊಳಪಡಿಸಲು ನೆರವಾದರು. ಸುಮಾರು 16 ಬಸ್ಸುಗಳಲ್ಲಿ ಕಾರ್ಮಿಕರು ತೆರಳುತ್ತಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾರ್ಗದರ್ಶನದಲ್ಲಿ ತಾಪಂ ಇಒ ರಾಜಣ್ಣ, ತಹಸೀಲ್ದಾರ್ ರಶ್ಮಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಸೂಕ್ತ ಸೂಚನೆಗಳನ್ನು ಒದಗಿಸಿದರು. ತಾಪಂ, ಕಂದಾಯ, ಪುರಸಭೆ, ಆರೋಗ್ಯ, ಕೆಎಸ್ಸಾರ್ಟಿಸಿ ಸಹಿತ  ನಾನಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು.

ನಿರಂತರ ಸುದ್ದಿಗಳಿಗೆ ಈ ಗುಂಪಿಗೆ ಸೇರಬಹುದು:

https://chat.whatsapp.com/GX45mPIvBYmC0f8LI6Ytsf

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.