ಬಂಟ್ವಾಳ

ಆಶಾ ಕಾರ್ಯಕರ್ತೆಯರಿಗೆ ರಮಾನಾಥ ರೈ ಅವರಿಂದ ಕಿಟ್ ವಿತರಣೆ

ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಾವೂರ,ದೇವಸ್ಯಮೂಡೂರು,ಪುಂಜಾಲಕಟ್ಟೆ ವಲಯದ ಎಲ್ಲಾ ಆಶಾ ಕಾರ್ಯಕರ್ತರಿಗೆ ಗೌರವಾರ್ಪಣೆ ನಡೆಯಿತು. ಈ ಸಂದರ್ಭ ಅವರಿಗೆ ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಲಾಯಿತು.

ಜಾಹೀರಾತು

ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ತಾಲೂಕ್ ಪಂಚಾಯತ್ ಸದಸ್ಯರುಗಳಾದ ಧನಲಕ್ಷ್ಮೀ ಬಂಗೇರ, ಸ್ವಪ್ನ ವಿಶ್ವನಾಥ್, ಕಾವಳಮೂಡೂರು ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಪೂಂಜ, ಪಂಚಾಯತ್ ಸದಸ್ಯರುಗಳಾದ ವಿನ್ಸೆಂಟ್ ಪಿಂಟೋ ಸರಪಾಡಿ,ದಯಾನಂದ ಶೆಟ್ಟಿ ಅಮಯೀ,ಚಂದ್ರಶೇಖರ ಕರ್ಣ, ಜಯಂತ ಪ್ರಭು, ಸತೀಶ್ ಪೂಜಾರಿ, ಸೊಸೈಟಿ ಸದಸ್ಯರು ಹಾಗೂ ನಿರ್ದೇಶಕರಾದ ಪ್ರಮೋದ್ ಮತ್ತು ಚಂದ್ರಹಾಸ ಬಿಯಾನಡ್ಕ, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ಉಪಸ್ಥಿತರಿದ್ದರು

ಬಿ.ರಮಾನಾಥ ರೈ ಅವರು ಕಿಟ್ ವಿತರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್,ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಸಿ ಬಂಗೇರ ಮತ್ತು ಸ್ವಪ್ನ ವಿಶ್ವನಾಥ್ ಪೂಜಾರಿ, ವಿ ಎಸ್ ಎಸ್ ಬ್ಯಾಂಕ್ ನ ನಿರ್ದೇಶಕರಾದ ಪ್ರಮೋದ್ ಕುಮಾರ್, ಚಂದ್ರಹಾಸ ಬಿಯನಡ್ಕ , ದಯಾನಂದ ಶೆಟ್ಟಿ ಅಮ್ಮೈ , ಸರಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ವಿನ್ಸನ್ ಪಿಂಟೊ , ಕಾವಳಮುಡೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂತೋಷ್ ಪೂಂಜಾ ಸದಸ್ಯರಾದ ಸತೀಶ್. ಪಿ. , ಜಯಂತ ಪ್ರಬು ಹಾಗೂ ದಿವಾಕರ್ ದಾಸ್ ಶೃತಿ ಆರ್ಟ್ಸ್ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.