ಕೋವಿಡ್ ನಿಂದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳದಾದ್ಯಂತ ಯಾವುದೇ ವಾಹನಗಳು ಬಂದು ಹೋಗದಂತೆ ನಿರ್ಬಂಧವನ್ನು ಈಗಾಗಲೇ ವಿಧಿಸಲಾಗಿದೆ. ಬಂಟ್ವಾಳ ಪೇಟೆಯ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅದಲ್ಲದೆ ರಸ್ತೆಯಲ್ಲದ ಮಾರ್ಗಗಳಲ್ಲೂ ಸಂಚಾರ ಮಾಡದಂತೆ ಸಂಪೂರ್ಣ ಪ್ರತಿಬಂಧಕವನ್ನು ವಿಧಿಸಲಾಗಿದೆ. ಸೋಮವಾರ ಬೆಳಗ್ಗೆಯೇ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಎಲ್ಲ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್, ಕಂದಾಯ ನಿರೀಕ್ಷಕರಾದ ನವೀನ್ ಬೆಂಜನಪದವು ಗ್ರಾಮಕರಣಿಕರಾದ ರಾಜು,ಜನಾರ್ಧನ, ಸಿಬ್ಬಂದಿ ಮೋಹನ್ ದಾಸ್ ಉಪಸ್ಥಿತರಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)