ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ 10 ದಿನಗಳಿಂದ ಸುಮಾರು 9 ಕುಟುಂಬಗಳ 19 ಮಂದಿ ಕೂಲಿ ಕಾರ್ಮಿಕರು ಆಶ್ರಯದಲ್ಲಿದ್ದಾರೆ.
ದಾನಿಗಳಿಂದ ಸಂಗ್ರಹಿಸಿದ ಆಹಾರ ಸಾಮಗ್ರಿಗಳನ್ನು ಒದಗಿಸಲಾಯಿತು. ಈಗ ಸರ್ಕಾರದ ವತಿಯಿಂದಲೇ ಉಚಿತ ಹಾಲು ಪೂರೈಕೆಯಾಗುತ್ತಿದೆ. ಗ್ರಾಪಂ ಸದಸ್ಯರಾದ ದೇವಿದಾಸ್ ಶೆಟ್ಟಿ, ನಾರಾಯಣ ಪೂಜಾರಿ, ಎ. ಸಿ. ಮೊಯಿದೀನ್, ಉದ್ಯಮಿ ಮಾದವೆ ಮಾವೆ ಸಹಿತ ಹಲವರು ನೆರವಾದರು. ಗ್ರಾಮ ಪಂಚಾಯತ್ ಪಿಡಿಒ ಮಾಯಾ ಕುಮಾರಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಇಸ್ಮಾಯಿಲ್ ಎಂ. ಉಸ್ತುವಾರಿಯಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ, ಪುಷ್ಪರಾಜ್, ಚಂದ್ರಶೇಖರ ಕಾರ್ಮಿಕರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…