ಬಂಟ್ವಾಳ

ಕ್ವಾರಂಟೈನ್ ಗ್ರಾಮದಲ್ಲಿ ರೇಷನ್ ವಿತರಿಸಿದ ತಾಲೂಕು ಕಚೇರಿ ಸಿಬ್ಬಂದಿ

www.bantwalnews.com Editor: Harish Mambady

ಜಾಹೀರಾತು

ಕೋವಿಡ್  ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಭಾಗಶಃ ಕ್ವಾರಂಟೈನ್ ನಲ್ಲಿದ್ದು, ಅದರಲ್ಲಿ ರೇಷನ್ ಅಂಗಡಿಯವರೂ ಸೇರಿರುವ ಕಾರಣ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ತಂಡ ಗ್ರಾಮದ ಜನರಿಗೆ ರೇಷನ್ ವಿತರಿಸುವ ಉಸ್ತುವಾರಿಯನ್ನು ಶುಕ್ರವಾರ ವಹಿಸಿಕೊಂಡಿತು.

ತುಂಬೆ ಸರಕಾರಿ ಶಾಲೆಯಲ್ಲಿ ಸುಮಾರು 350 ಮಂದಿಗೆ ರೇಷನ್ ಒದಗಿಸಲಾಯಿತು.  ಕ್ವಾರಂಟೈನ್ ಪ್ರದೇಶಗಳ ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಗ್ರಾಪಂ ನಿರ್ವಹಿಸಿತು. ಉಳಿದವರಿಗೆ ಶಾಲೆಯಲ್ಲಿ ರೇಷನ್ ವಿತರಣಾ ಕಾರ್ಯ ನಡೆಯಿತು. ಬಂಟ್ವಾಳ ತಾಲೂಕು ಕಚೇರಿಯ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮಲೆಕ್ಕಿಗರಾದ ಪ್ರಶಾಂತ್, ನಾಗರಾಜ್, ವಿಜೇತಾ, ಗ್ರಾಮಸಹಾಯಕರಾದ ರೂಪೇಶ್ ಸದಾನಂದ, ತೂಕ ಅಳತೆ, ವಿತರಣೆ ಸಹಿತ ಲೆಕ್ಕಪತ್ರವನ್ನು ನೋಡಿಕೊಳ್ಳುವ ಕಾರ್ಯವನ್ನು ನಡೆಸಿದರು. ಒಂದೆರಡು ದಿನಗಳಲ್ಲಿ ಇಡೀ ಗ್ರಾಮಕ್ಕೆ ರೇಷನ್ ವಿತರಣೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts