ಬಂಟ್ವಾಳ

ಸಜೀಪಮೂಡ, ಮುನ್ನೂರು: ರೈ ನೇತೃತ್ವದಲ್ಲಿ ಅವಶ್ಯ ವಸ್ತುಗಳ ವಿತರಣೆ

www.bantwalnews.com Editor: Harish Mambady

ಜಾಹೀರಾತು

ಮಾಜಿ ಸಚಿವ ಬಿ.ರಮನಾಥ ರೈ ಅವರ ಮಾರ್ಗದರ್ಶನದಲ್ಲಿ, ತಾಲೂಕು ಪಂಚಾಯಿತಿ ಸದಸ್ಯ ಕೆ.ಸಂಜೀವ ಪೂಜಾರಿಯವರ ನೇತೃತ್ವದಲ್ಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜಾ ಅವರ ಸಹಕಾರದೊಂದಿಗೆ  ಸಜೀಪಮುಡ ಗ್ರಾಮ ಪಂಚಾಯತಿ, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರ ಸಂಘ, ಎನ್ ವಿ.ಡಿಜಿಟಲ್ಸ್ ಮೆಲ್ಕಾರ್ ಇವರ ಸಹಯೋಗದಲ್ಲಿ ಸಜೀಪ ಮೂಡ ಗ್ರಾಮದ ಎಲ್ಲಾ ಮನೆಗಳಿಗೆ ಅಕ್ಕಿ ವಿತರಣ ಕಾರ್ಯಕ್ರಮಕ್ಕೆ ಸಜೀಪಮೂಡ  ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಹಾಗೂ ಬೊಳ್ಳಾಯಿಯಲ್ಲಿ ಚಾಲನೆ ನೀಡಲಾಯಿತು.

ಮಾಜಿ ಸಚಿವ ಬಿ. ರಮನಾಥ ರೈಯವರು ಮನೆಮನೆಗಳಿಗೆ  ತೆರಳಿ ತಲಾ 10 ಕೆ.ಜಿ.ಯಂತೆ ಅಕ್ಕಿಯನ್ನು ವಿತರಿಸಿದರು. ಸಜೀಪಮೂಡ ಗ್ರಾಮದಲ್ಲಿ ಒಟ್ಟು 2500 ರಷ್ಟು ಮನೆಗಳಿದ್ದು ಬಡವ ಶ್ರೀಮಂತರೆನ್ನದೆ ಎಲ್ಲಾ ಮನೆಗಳಿಗೂ ಒಟ್ಟು 250 ಕ್ವಿಂಟಲ್ ಅಕ್ಕಿಯನ್ನು ವಿತರಿಸಲಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ಎಲ್ಲಾ ಮನೆಗಳಿಗೂ ಅಕ್ಕಿ ತಲಿಪಲಿದೆ ಎಂದು ತಾ.ಪಂ.ಸದಸ್ಯ ಸಂಜೀವ ಪೂಜಾರಿ ತಿಳಿಸಿದ್ದಾರೆ. ಮಂಗಳವಾರ ಬೊಳ್ಳಾಯಿ, ಜಾರಕೋಡಿನಗ್ರಿ, ಪಣೋಲಿ ಬೈಲು, ಕಂಚಿಲ ಗುರುಮಂದಿರ ಪರಿಸರದಲ್ಲಿ ಅಕ್ಕಿ ವಿತರಿಸಲಾಗಿದೆ. ಸಂದರ್ಭ ತಾ.ಪಂ.ಸದಸ್ಯ ಸಂಜೀವ ಪೂಜಾರಿ, ಸಜೀಪಮೂಡ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಪ್ರಮುಖರಾದ ರಮೇಶ್ ಪಣೋಲಿ ಬೈಲು, ಜಯಶಂಕರ ಕಾನ್ಸಾಲೆ, ಸುದೀಪ್ ಕುಮಾರ್ ಶೆಟ್ಟಿ, ಗಿರೀಶ್  ಕುಮಾರ್ ಪೆರ್ವ, ಯೋಗೀಶ್ ಬೆಳ್ವಾಡಕರಿಂ ನಗ್ರಿ, ಹಮೀದ್, ಇಕ್ಬಾಲ್ ನಂದಾವರ, ಹಜೀದ್, ಅಬ್ದುಲ್ ಕುಂಞ ಅಶೋಕ್ ಕೋಮಾಲಿ, ರೋಹಿತ್ ಪೂಜಾರಿ ಪಟ್ಟುಗುಡ್ಡೆ, ವಿನೋಧ್ ಪೂಜಾರಿ ಕೊಮಾಲಿ ಮತ್ತಿತರರು ಉಪಸ್ಥಿತರಿದ್ದರು

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.