ಕೊರೊನಾ ಜಾಗೃತಿಗಾಗಿ ಭಾನುವಾರ ಸಂಜೆ ವಾಟ್ಸಾಪ್, ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ದೀಪ ಹಚ್ಚಿದ ಚಿತ್ರಗಳದ್ದೇ ದೀಪಾವಳಿ. ಒಬ್ಬೊಬ್ಬರ ಮನೆಯಲ್ಲೂ ಒಂದೊಂದು ರೀತಿ. ಕೆಲವರು ಮೊಬೈಲ್ ಬೆಳಕು ಹಿಡಿದರೆ, ಮತ್ತೊಬ್ಬರು ಟಾರ್ಚ್ ಹಿಡಿದರು. ಕೆಲವರು ವಿಡಿಯೋ ಮಾಡಿದರು, ಕೆಲವರು ರಂಗವಲ್ಲಿ ಬಿಡಿಸಿ ಸುತ್ತ ದೀಪವಿಟ್ಟರು. ಹಣತೆಯ ಸಾಲುಗಳ ಜೊತೆ ಸೆಲ್ಫೀ ಕ್ಲಿಕ್ಕಿಸಿದವರೂ ಇದ್ದರು. ಇಲ್ಲೊಂದು ಕಡೆ ಕೊರೊನಾದ ಚಿತ್ರವನ್ನು ಬಿಡಿಸಿ, ಅದರ ಸುತ್ತ ದೀಪವಿರಿಸಿ, ಗೋ ಕೊರೊನಾ ಎಂದು ಬರೆದು ಕಲಾತ್ಮಕತೆ ಮೆರೆದವರು ಜೋಡುಮಾರ್ಗ ಜೇಸಿಯ ಕಿಶನ್ ಹೊಳ್ಳ ನೂಜಿಪ್ಪಾಡಿ. ಇವರು ಕಳುಹಿಸಿದ ಚಿತ್ರಗಳು ಇವು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…