ಏ.3ರಿಂದ ರಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಾಂದ್ಯಂತ ಯಾವುದೇ ಖಾಸಗಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನ ಬಳಕೆ ಸಾಗಾಣಿಕ ವಾಹನಗಳನ್ನು ಹೊರತುಪಡಿಸಿ ಇತರೆ ತುರ್ತು ಸೇವೆಗಳಾದ ಆರೋಗ್ಯ ಇಲಾಖೆ, ಬ್ಯಾಂಕ್ ನೌಕರರು, ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಎಲ್ಲಾ ಅಗತ್ಯ ಸೇವೆಗಳ ಸಿಬ್ಬಂದಿಗಳು ತಮ್ಮ ಗುರುತು ಚೀಟಿಯನ್ನು ತೋರಿಸಿ ಕರ್ತವ್ಯಕ್ಕೆ ತೆರಳಬಹುದಾಗಿದೆ. ದಿನಬಳಕೆಯ ಸಾಮಾಗ್ರಿಗಳನ್ನು ಖರೀದಿಸಲು ಈಗಾಗಲೇ ನಿಗಧಿಯಾಗಿರುವಂತೆ ಬೆಳಿಗ್ಗೆ 7 ಗಂಟೆಯಿಂದ 12 ಗಂಟೆಯವರೆಗೆ ತೆರಳುವ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಬಹುದಾಗಿದೆ.ಅಟೋರಿಕ್ಷಾ/ಇತರೆ ಯಾವುದೇ ಬಾಡಿಗೆ ವಾಹನದಲ್ಲಿ ದಿನಬಳಕೆಯ ಸಾಮಾಗ್ರಿ ಖರೀದಿಗೆ ತೆರಳುವವರು ಇತರೆ ಯಾವುದೇ ಜನರನ್ನು ಒಯ್ಯುವಂತಿಲ್ಲ. ಇವುಗಳನ್ನು ಹೊರತುಪಡಿಸಿ ಯಾವುದೇ ವೈಧ್ಯಕೀಯ ತುರ್ತು ಸಮಯದಲ್ಲಿ 108 ಅಥವಾ 1077 ಕರೆ ಮಾಡಬಹುದಾಗಿದೆ. ವೈಧ್ಯಕೀಯ ತುರ್ತು ಸಮಯದಲ್ಲಿ ಖಾಸಗಿ ವಾಹನದ ಬಳಕೆಗಾಗಿ 1077 ಗೆ ಕರೆಮಾಡಿ ಪಾಸ್ ಪಡೆಯಲು ವ್ಯವಸ್ಥೆ ಮಾಡಲಾಗಿರುತ್ತದೆ. ಸಾರ್ವಜನಿಕರು ಸಹಕರಿಸಲು ಅವರು ವಿನಂತಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…