ಕಲ್ಲಡ್ಕ

ಕಲ್ಲಡ್ಕದಲ್ಲಿ ಕುಟುಂಬ ರಕ್ಷಣೆ, ಆಸ್ಪತ್ರೆಯಲ್ಲಿ ರೋಗಿ ಸಹಾಯಕರಿಗೆ ಊಟದ ವ್ಯವಸ್ಥೆ

  • ಬಂಟ್ವಾಳ ಶಾಸಕರ ಸಹಾಯವಾಣಿಗೆ ನಿರಂತರ ಕರೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಹಾಯವಾಣಿಗೆ ನಿರಂತರ ಕರೆಗಳು ಬರುತ್ತಿವೆ. ಇವುಗಳ ಪೈಕಿ ಕಲ್ಲಡ್ಕದಲ್ಲಿ ಕುಟುಂಬವೊಂದನ್ನು ರಕ್ಷಿಸಲಾಯಿತಲ್ಲದೆ, ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆ ಎಲ್ಲ ರೋಗಿಗಳ ಸಹಾಯಕರಿಗೆ ಊಟದ ವ್ಯವಸ್ಥೆಯನ್ನು ಕರೆಯ ಮೂಲಕ ಸ್ಪಂದಿಸಿ ನೀಡಲಾಯಿತು.

ಜಾಹೀರಾತು

ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ರೋಗಿಯ ಸಹಾಯಕರೊಬ್ಬರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಚೇರಿಗೆ ಬಂದ  ಮನವಿಗೆ ತಕ್ಷಣ ಸ್ಪಂದಿಸಿದ ಬಂಟ್ವಾಳ ಶಾಸಕರ ಸಹಾಯವಾಣಿ ತಂಡ  ಸಂಸದರ ಆಪ್ತ ಸಹಾಯಕ ಸುಧಾಕರ್ ಮೂಲಕ ಲೇಡಿಗೋಶನ್ ಆಸ್ಪತ್ರೆಯ ಎಲ್ಲಾ ರೋಗಿಗಳ ಸಹಾಯಕರಿಗೆ  ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಯಿತು.

ಕಲ್ಲಡ್ಕದ ಬೀದಿಬದಿಯ ಸಂತೆಕಟ್ಟೆಯೊಂದರಲ್ಲಿ ನಾಲ್ಕು ದಿನಗಳಿಂದ ದಿಕ್ಕುದೆಸೆ ಇಲ್ಲದ ಯಲ್ಲಾಪುರ ಮೂಲದ ಕುಟುಂಬವೊಂದಕ್ಕೆ ತಾತ್ಕಾಲಿಕ ವ್ಯವಸ್ಥೆಯೊಂದನ್ನು ಗುರುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಹಾಯವಾಣಿ ತಂಡದ ಸದಸ್ಯ ವಜ್ರನಾಥ ಕಲ್ಲಡ್ಕ ಮೂಲಕ ತಿಳಿದ ತಹಸೀಲ್ದಾರ್ ರಶ್ಮಿ ಎಸ್.ಆರ್. ಕಲ್ಪಿಸಿಕೊಟ್ಟರು. ಸ್ಥಳೀಯ ಮುಖಂಡ ಮಹಮ್ಮದ್ ಮುಸ್ತಾಫಾ ಮನೆಯಲ್ಲಿ ತಾತ್ಕಾಲಿಕವಾಗಿರುವಂತೆ ಅವರು ವ್ಯವಸ್ಥೆ ಕಲ್ಪಿಸಿದ್ದಾರೆ.

www.bantwalnews.com Editor: Harish Mambady

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.