ಬಂಟ್ವಾಳ

ಎಂ.ಎಲ್.ಎ. ಕಚೇರಿ ಕಾರ್ಯಪಡೆಗೆ ಸ್ಪಂದನೆ, ದಿನ 24 ತಾಸು ಸೇವೆ

www.bantwalnews.com Editor: Harish Mambady

ಪ್ರತಿ ಐದು ನಿಮಿಷಕ್ಕೊಂದು ಕರೆ. ದೂರದೂರಿಂದ ಮನವಿಗಳು, ಸ್ಪಂದನೆಗೆ ಆಂಬುಲೆನ್ಸ್.. ಹೀಗೆ ಬಂಟ್ವಾಳ ಎಂಎಲ್ಎ ರಾಜೇಶ್ ನಾಯ್ಕ್ ಉಳಿಪ್ಪಾಡಿ ಆರಂಭಿಸಿರುವ ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಪಡೆಗೆ ಬಿಡುವಿಲ್ಲದ ಕೆಲಸ. ಈಗಾಗಲೇ ಇಲ್ಲಿರುವ ಆಂಬುಲೆನ್ಸ್ ನಲ್ಲಿ ಅಗತ್ಯವುಳ್ಳವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕಾರ್ಯ ನಡೆಸಲಾಗಿದೆ.

ಜಾಹೀರಾತು

 ಜನಸಾಮಾನ್ಯರ ಅತೀ ತುರ್ತಾದ ಆಹಾರ, ಆರೋಗ್ಯ ಮತ್ತಿತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ರಚಿಸಲಾದ ಈ ತಂಡ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ. ಶಾಸಕರ ಕಚೇರಿಯನ್ನು ಕೇಂದ್ರಸ್ಥಾನವಾಗಿರಿಸಿಕೊಂಡು ಈ ತಂಡಗಳು ಕಾರ್ಯಾಚರಿಸುತ್ತಿದೆ,  ಶಾಸಕ ರಾಜೇಶ್ ನಾಯ್ಕ್ ಕಚೇರಿ  ಅತೀ ಅಗತ್ಯದ ಸಂದರ್ಭದಲ್ಲಿ ಗ್ರಾಮಮಟ್ಟದಲ್ಲಿ ತುರ್ತು ಸ್ಪಂದನೆಗಾಗಿ ಶಾಸಕರ ಕಚೇರಿ 08255298613 ಸಂಪರ್ಕಿಸಬಹುದು ಎಂದು ಕಾರ್ಯಪಡೆಯ ಸದಸ್ಯರು ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.