ವಿಟ್ಲ

ಲೇಖಕ, ಸಹಕಾರಿ ಶಂಕರ ಭಟ್ ನಿಧನ

ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಸುಮವನ ಎಂಬಲ್ಲಿ ನಿವಾಸಿ ಲೇಖಕ, ಪೂಕಳ ಶಂಕರ ಭಟ್ (94) ಹೃದಯಾಘಾತದಿಂದ ಜ.13 ರಂದು ನಿಧನರಾದರು. 

ಜಾಹೀರಾತು

ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ ನ ಕಾರ್ಯನಿರ್ವಹಣಾಧಿಕಾರಿಯಾಗಿ, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಳದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇವರು ಯಕ್ಷಗಾನ ಅರ್ಥಧಾರಿಯಾಗಿದ್ದರು.

ಭಾಮಿನಿ ಷಟ್ಪದಿಯಲ್ಲಿ ಪೂಕಳ ರಾಮಾಯಣ, ಗುರುಚರಿತ್ರೆ ಮುಂತಾದ ಅನೇಕ ಕಾವ್ಯಗಳ ರಚನೆ, ಕೀರ್ತನೆ ರಚನೆ, ಯಕ್ಷಗಾನ ಪ್ರಸಂಗ ರಚನೆ, ಚುಟುಕು ಸಾಹಿತ್ಯ ಲೋಕದಲ್ಲಿ ಸೇವೆ, ಅಕಾರಾದಿ ಶಬ್ದಕೋಶಗಳು , ಪುರಾಣ ಕೋಶ ಗ್ರಂಥಗಳನ್ನೂ ಇವರು ರಚಿಸಿದ್ದರು. ಕನ್ಯಾನದ ಭಾರತ ಸೇವಾ ಆಶ್ರಮದಲ್ಲಿ ಲೆಕ್ಕ ಪರಿಶೋಧಕರಾಗಿ ಸೇವೆ ಸಲ್ಲಿಸಿದ್ದ ಇವರು ಪ್ರಗತಿ ಪರಕೃಷಿಕರಾಗಿದ್ದರು. ಕಾಸರಗೋಡು ಶ್ರೀ ಎಡನೀರು ಮಹಾ ಸಂಸ್ಥಾನ, ಹೊಸನಗರ ಮಠಗಳಿಂದ ವಿಶೇಷ ಗೌರವ, ಕೋಳ್ಯೂರು ದೇವಳದಲ್ಲಿ ಮತ್ತು ಹತ್ತು ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. ಪತ್ನಿ, ಸುಜೋಕು ವೈದ್ಯ ಪದ್ದತಿಯಲ್ಲಿ ಚಿಕಿತ್ಸೆ ನೀಡುವ ಪಿ. ಸುಬ್ರಹಣ್ಯ ಭಟ್ ಸೇರಿದಂತೆ 4 ಪುತ್ರರು, ಪುತ್ರಿ ಇದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.