ಕಲ್ಲಡ್ಕ

ಸ್ವಾತಂತ್ರ್ಯ ಯೋಧ ಶ್ಯಾಮರಾಯ ಅಚಾರ್ ಯೋಗಕ್ಷೇಮ ವಿಚಾರಿಸಿದ ತಹಶೀಲ್ದಾರ್ ರಶ್ಮೀ ಎಸ್.ಆರ್

ಸ್ವಾತಂತ್ರ್ಯ ಹೋರಾಟಗಾರ 95ರ ಹರೆಯದ ಶ್ಯಾಮರಾಯ ಆಚಾರ್ ರವರನ್ನು ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ ರವರು ಮಂಗಳವಾರ ರಾತ್ರಿ  ಕಲ್ಲಡ್ಕದ ಶಿಲ್ಪಾ ಸದನ ನಿವಾಸದಲ್ಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.
ಕಳೆದ ಆಗಸ್ಟ್ ಆ.14 ರಂದು ಶಿವಮೊಗ್ಗದಿಂದ ಹೊರಟಿದ್ದ ಇವರು ಬಿ.ಸಿ.ರೋಡಿನಲ್ಲಿ ಆ.15 ರಂದು ನಡೆಯಬೇಕಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಬೇಕಿತ್ತು.  ಆದರೆ ಇವರು ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಆಗುಂಬೆ ಬಳಿ ಬಸ್ಸಿನಿಂದ ಇಳಿದವರು, ಆಕಸ್ಮಿಕವಾಗಿ ಬಿದ್ದು ಸೊಂಟದ ಭಾಗದಲ್ಲಿ ಎಲುಬಿಗೆ ತೊಂದರೆ ಉಂಟಾಗಿ ಒಂದು ಶಸ್ತ್ರ ಚಿಕಿತ್ಸೆ ನಡೆದಿತ್ತು. ಇದೀಗ ವಾರದ ಹಿಂದೆ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದ್ದು, ಕಲ್ಲಡ್ಕ ದ ಮಗಳ‌ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಈ  ವಿಚಾರ ತಿಳಿದ ತಹಶೀಲ್ದಾರ್ ರಶ್ಮೀ ಯವರು ಮಂಗಳವಾರ ರಾತ್ರಿ ಯೇ ಕಲ್ಲಡ್ಕಕ್ಕೆ ಆಗಮಿಸಿ ಹಿರಿಜೀವದ ಯೋಗಕ್ಷೇಮ ವಿಚಾರಿಸಿದರು.
ತನ್ನ ಭೇಟಿಗೆ ತಾಲೂಕು ದಂಡಾಧಿಕಾರಿಗಳು ಬಂದಿರುವುದಕ್ಕೆ ಸಂತಸದಿಂದ ಅತೀವ ಭಾವುಕರಾದ ಶ್ಯಾಮರಾಯ ಆಚಾರ್ ರವರು,ನಿಮ್ಮಂತ ಯುವ ಅಧಿಕಾರಿಗಳ ಸೇವೆ ಎಲ್ಲರಿಗೂ ಮಾದರಿಯಾಗಲಿ ಎಂದರು.
ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್  ರವರು,  ದೊಡ್ಡ ಸರ್ಜರಿಯ ನೋವನ್ನೂ ಮರೆತು, ನಗು ಮುಖ ದೊಂದಿಗೆ ಜೀವನದ ಹೋರಾಟ ನಡೆಸುತ್ತಿರುವ  ಶ್ಯಾಮರಾಯ ಆಚಾರ್ಯರ ನಗುಮುಖವೇ ನಮಗೆಲ್ಲಾ ಸ್ಪೂರ್ತಿ, ಜ.26 ರ ಗಣರಾಜ್ಯೋತ್ಸವ ಕ್ಕೆ ಬಿ.ಸಿ.ರೋಡಿಗೆ ತಾಲೂಕು ಕಛೇರಿಗೆ ಬರುವಂತಾಗಬೇಕೆಂದರು.
ಈ ವೇಳೆ ಸ್ವಾತಂತ್ರ್ಯ ಹೋರಾಟಗಾರ ಎಂ ಡಿ ಶ್ಯಾಮರಾಯಾಚಾರ್ ರವರ ಮಗ ಸತೀಶ್, ಹಿರಿಯ ಮಗಳು ಸತ್ಯದೇವಿ ಹಾಗೂ ಅಳಿಯ ಸುರೇಶ್ , ಮೊಮ್ಮಗ, ಪತ್ರಕರ್ತ ಮೌನೇಶ ವಿಶ್ವಕರ್ಮ ಉಪಸ್ಥಿತರಿದ್ದರು.
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.