ಬಂಟ್ವಾಳ: ಜೇಸಿ ಜೋಡುಮಾರ್ಗ ನೇತ್ರಾವತಿ ಪದಗ್ರಹಣ ಕಾರ್ಯಕ್ರಮವನ್ನು ಸೆ.144ರನ್ವಯ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಜೇಸಿ ಅಧ್ಯಕ್ಷ ಹರ್ಷರಾಜ್ ಸಿ. ತಿಳಿಸಿದ್ದಾರೆ.
2020ನೇ ಸಾಲಿಗೆ ಜೇಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶ್ರೀನಿಧಿ ಭಟ್ ಟಿ.ಎನ್. ಪದಗ್ರಹಣ ಡಿಸೆಂಬರ್ 22ರಂದು ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ಸಂಜೆ 7 ಗಂಟೆಗೆ ನಿಗದಿಯಾಗಿತ್ತು. ಪದಾಧಿಕಾರಿಗಳಾಗಿ ಶ್ರೀನಿಧಿ ಭಟ್ (ಅಧ್ಯಕ್ಷ), ಹರ್ಷರಾಜ್ ಸಿ (ಐಪಿಪಿ), ಸುಬ್ರಹ್ಮಣ್ಯ ರಾವ್ ಪಿ (ಕಾರ್ಯದರ್ಶಿ), ಲಕ್ಷ್ಮಣ್ (ಜತೆ ಕಾರ್ಯದರ್ಶಿ), ಖಜಾಂಚಿಯಾಗಿ ಕಿಶನ್ ಎನ್. ರಾವ್, ಉಪಾಧ್ಯಕ್ಷರುಗಳಾಗಿ ಆಶಿಕ್ ಕುಕ್ಕಾಜೆ, ಅಮಿತಾ ಹರ್ಷರಾಜ್, ಗಾಯತ್ರಿ ಲೋಕೇಶ್, ಕೃಷ್ಣರಾಜ್ ರಾವ್ ಮತ್ತು ನರಸಿಂಹ ಮಯ್ಯ, ಮಲ್ಲಿಕಾ ಆಳ್ವ (ಜೇಸಿರೆಟ್ ಅಧ್ಯಕ್ಷೆ), ಅಭಿಷೇಕ್ (ಜೇಜೇಸಿ ಅಧ್ಯಕ್ಷ), ಜಯರಾಜ್ ಎಸ್. ಬಂಗೇರ, ಧೀರಜ್ ಹೆಚ್., ಹರಿಶ್ವಂದ್ರ ಆಳ್ವ, ರವೀಂದ್ರ ಕುಕ್ಕಾಜೆ, ಶೈಲಜಾ ರಾಜೇಶ್ ಹಾಗೂ ಹರಿಪ್ರಸಾದ್ ಕುಲಾಲ್ (ನಿರ್ದೇಶಕರು) ಇವರು ಆಯ್ಕೆಗೊಂಡಿರುತ್ತಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…