ತುಳುಕೂಟ ಬಂಟ್ವಾಳ ದ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಬಂಟ್ವಾಳ ತಾಲೂಕು ಮಟ್ಟದ ತುಳು ನ್ರತ್ಯಭಜನಾ ಸ್ಪರ್ಧೆ ನ. 24ರಂದು ನಡೆಯಲಿದ್ದು, ಭಜನಾ ತಂಡಗಳನ್ನು ಆಹ್ವಾನಿಸಲಾಗಿದೆ.
ಬಿ.ಸಿ.ರೋಡಿನ ಸ್ಪರ್ಷಾ ಕಲಾ ಮಂದಿರ ದಲ್ಲಿ ಬೆಳಿಗ್ಗೆ 8.30ರಿಂದ ಸಂಜೆ 6-30 ರ ತನಕ ಸ್ಪರ್ಧೆ ನಡೆಯುವುದು. ತಾಲೂಕಿನ ಎಲ್ಲಾ ಉತ್ಸಾಹಿ ಭಜನಾ ಮಂಡಳಿಗಳು, ಭಜನಾ ತಂಡಗಳು ಭಾಗವಹಿಸಬೇಕೆಂದು ತುಳುಕೂಟ ಬಂಟ್ವಾಳದ ಅಧ್ಯಕ್ಷರಾದ ಸುದರ್ಶನ್ ಜೈನ್ ಮತ್ತು ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡಗಳು ನವಂಬರ್ 14 ಸಂಜೆ 4ಗಂಟೆಯ ಒಳಗೆ ಪ್ರವೇಶ ಪತ್ರವನ್ನು ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸ್ಪರ್ಧಾ ಸಂಯೋಜಕರಾದ ಮಂಜು ವಿಟ್ಲ 7975155486 ಮತ್ತು ಕಾರ್ಯದರ್ಶಿ ಎಚ್ಕೆ ನಯನಾಡು 9449105907 ಇವರನ್ನು ಸಂಪರ್ಕಿಸಬಹುದು . ಪ್ರಥಮ, ದ್ವಿತೀಯ, ತ್ರತೀಯ ನಗದು ಬಹುಮಾನ, ಸ್ಮರಣಿಕೆ, ಮತ್ತು ಪ್ರಮಾಣ ಪತ್ತ ನೀಡಲಾಗುವುದು, ಭಾಗವಹಿಸಿದ ಎಲ್ಲಾ ತಂಡದ ಭಜನಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…