ಬಿಲ್ಲವ ಸಮಾಜ ಸೇವಾ ಸಂಘ (ರಿ) ಕಲ್ಲಡ್ಕ ವಲಯದ ಬಾಳ್ತಿಲ ,ಗೋಳ್ತಮಜಲು ,ಅಮ್ಟೂರು, ವೀರಕಂಬ, ಬೊಂಡಾಲ, ಬೋಳಂತೂರು, ಗ್ರಾಮ ವ್ಯಾಪ್ತಿಯ ವಲಯಮಟ್ಟದ ಬಿಲ್ಲವ ಬಾಂಧವರ ಕೆಸರ್ದ ಕಂಡೊಡು ಕುಸಲದ ಗೊಬ್ಬುಲು ಕೆಸರುಗದ್ದೆ ಕೂಟ ಕಲ್ಲಡ್ಕ ಸಮೀಪ ನರಹರಿನಗರ ಗದ್ದೆಯಲ್ಲಿ ನಡೆಯಿತು.
ವಿಶೇಷ ಆಹ್ವಾನಿತರಾಗಿ ಚಿತ್ರನಟ ಅರವಿಂದ ಬೋಳಾರ್ ಆಗಮಿಸಿದ್ದರು. ಏರಮಲೆ ಕ್ಷೇತ್ರದ ಪ್ರಧಾನ ಅರ್ಚಕ ಕೇಶವ ಶಾಂತಿ , ಜ್ಯೋತಿಷಿ ಮನೋಜ್, ದೀಪ ಪ್ರಜ್ವಲಿಸಿ ಕ್ರೀಡಾಕೂಟದ ಗದ್ದೆಗೆ ಫಲ ತಾಂಬೂಲ ಇಟ್ಟು ಹಾಲು ಎರೆದು ಕಾರ್ಯಕ್ರಮ ಉದ್ಘಾಟಿಸಿರು.
ಅಧ್ಯಕ್ಷತೆಯನ್ನು ಮಾಜಿ ಶಾಸಕ ರುಕ್ಮಯ ಪೂಜಾರಿ ವಹಿಸಿದ್ದರು. ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು. ಅತಿಥಿಗಳಾಗಿ ಡಾ. ವಿದ್ಯಾಸಾಗರ್, ಚಿತ್ರನಿರ್ದೇಶಕ ರಂಜಿತ್ ಸುವರ್ಣ, ಯುವವಾಹಿನಿ ಬಂಟ್ವಾಳ ಅಧ್ಯಕ್ಷ ಇಂದಿರೇಶ್, ತುಳುನಾಡ ಬಿರುವೆರ್ ಸ್ಥಾಪಕಾಧ್ಯಕ್ಷ ಲೋಕೇಶ್ ಕೋಡಿಕೆರೆ, ಪ್ರಮುಖರಾದ ಕೃಷ್ಣಪ್ಪ ಪೂಜಾರಿ ದೋಟ, ಸುಂದರ ರಾಕ್ ಲೈನ್ ನರಹರಿನಗರ, ಲೋಕೇಶ್ ಪೂಜಾರಿ, ಶರತ್ ಕುಮಾರ್ ಅಮ್ಟೂರು,ಗುರುರಾಜ್ ಬಂಟ್ವಾಳ ,ಸಂಜೀವ ಪೂಜಾರಿ ಚಂದ್ರಶೇಖರ್ ಟೈಲರ್ ಗೋಳ್ತಮಜಲು,, ಶರತ್ ಸೇನೆರೇಕೋಡಿ, ವಸಂತ ಗೋಳ್ತಮಜಲು, ಮಹಾಬಲ ಮುಳಿ ಕೊಡಂಗೆ, ಚಂದ್ರಶೇಖರ್ ಬಂಗೇರ ಬಾಯಿಲ, ಜನಾರ್ಧನ ಪೂಜಾರಿ ಗೋಲಿಮಾರ್, ಗಂಗಾಧರ ಕೆ ಕಲ್ಲಡ್ಕ ಹಾಗೂ ಕ್ರೀಡಾಕೂಟ ಗದ್ದೆಯ ಮಾಲಕರಾದ ದಿವಂಗತ ಚಂದ್ರವತಿ ಪೂಜಾರ್ತಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಗ್ರಹಿಕಾ ಪ್ರಾರ್ಥಿಸಿ ಮೋನಪ್ಪ ದೇವಸ್ಯ ಸ್ವಾಗತಿಸಿದರು. ವಸಂತ ಬಟ್ಟ ಹಿತ್ತಿಲು ವಂದಿಸಿದರು.
ಬಳಿಕ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ವಿವಿಧ ರೀತಿಯ ಕ್ರೀಡಾಕೂಟಗಳು ನಡೆದವು. ಕಾರ್ಯಕ್ರಮಕ್ಕೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಮಿಥುನ್ ಪೂಜಾರಿ ಹೊಸಮನೆ ಮತ್ತಿತರರರು ಶುಭ ಕೋರಿದರು.
ವಲಯ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಿತು. ಉದ್ಯಮಿ ಸಾಗರ್ ಸುವರ್ಣ, ಲೋಕೇಶ್ ಸುವರ್ಣ ಕೃಷ್ಣಕೊಡಿಚೆನ್ನಪ್ಪ ಕೋಟ್ಯಾನ್ ತೋಟ ,ಸುರೇಂದ್ರ ಅಮೀನ್ ಮರಕಡಬೈಲು, ಪ್ರಕಾಶ್ ಕುರ್ಮನ್, ಯತಿನ್ ಎಳ್ತಿ ಮಾರ್, ಚೇತನ್ ಮೆಲ್ಕರ್ ,ಪುರುಷೋತ್ತಮ ಸಾಲಿಯಾನ್ ಮಂಚಿ, ಕಿಶೋರ್ ಕಟ್ಟೆಮರ್, ದಯಾನಂದ, ಪುಷ್ಪ ಸತೀಶ್, ಸುಜಾತ ರಾಜೇಶ್ ಸುವರ್ಣ ಕೃಷ್ಣ ಕೊಡಿ, ಜಯಪ್ರಕಾಶ್ ತಕ್ಕಿಪಾಪು ,ಯತಿನ್ ಕುಮಾರ್ ಬೊಂಡಾಲ, ರವಿ ಸುವರ್ಣ ,ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ ಉಪಸ್ಥಿತರಿದ್ದರು ದಿನೇಶ್ ಸುವರ್ಣ ರಾಯಿ, ಶರತ್ ಪೂಜಾರಿ ಅಡ್ವೆ, ಉದಯ ಕೆಲಿಂಜ, ಸಂತೋಷ್ ಬೋಲ್ಪೋಡಿ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…