ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಬಿ.ಸಿ.ರೋಡಿನಲ್ಲಿ ಪೂಜಿಸಲಾದ ಗಣಪತಿಗೆ ಕೈಕಂಬದ ಶ್ರೀರಾಮ ಗೆಳೆಯರ ಬಳಗ ವತಿಯಿಂದ ಸುಮಾರು ಮೂರೂವರೆ ಸಾವಿರ ಅರಳಿನ ಉಂಡೆಗಳ ಹಾರವನ್ನು ಅರ್ಪಿಸಲಾಯಿತು.
ಬಿ.ಸಿ.ರೋಡಿನಿಂದ ಕೈಕಂಬ ಪೊಳಲಿ ದ್ವಾರದವರೆಗೆ ಮೆರವಣಿಗೆಸಾಗಿದ ಸಂದರ್ಭ ಗೆಳೆಯರ ಬಳಗದ ಅಧ್ಯಕ್ಷ ಸದಾಶಿವ ಕೈಕಂಬ ನೇತೃತ್ವದಲ್ಲಿ ಭಕ್ತರು ಬೃಹತ್ ಹಾರವನ್ನು ಅರ್ಪಿಸಿದರು. ಸುಮಾರು 10 ಅಡಿ ಉದ್ದದ ಈ ಮಾಲೆ ಜನಾಕರ್ಷಣೆಗೆ ಒಳಗಾಯಿತು. ಉಪಾಧ್ಯಕ್ಷ ಶೈಲೇಶ್ ಕೈಕಂಬ, ಜಗದೀಶ್ ಕಾರ್ಯದರ್ಶಿ, ಗೌರವ ಸಲಹೆಗಾರ ರಮೇಶ್, ಮಚ್ಚೆಂದ್ರ ಸಾಲಿಯಾನ್ ಗುರುಕೃಪ ಹಾಗೂ ಸಂಘದ ಸದಸ್ಯರು ಇದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…