ಪ್ರಮುಖ ಸುದ್ದಿಗಳು

ವೃಕ್ಷ ಸುರಕ್ಷಾ ಸಮಾರೋಪಕ್ಕೆ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ

ಯಾರು ಸುಕ್ರಿಬೊಮ್ಮಗೌಡ? ಇಲ್ಲಿದೆ ವಿವರ

ಜಾಹೀರಾತು

ಯಾವುದೇ ಪ್ರಶಸ್ತಿ, ಪ್ರಚಾರ, ಪುರಸ್ಕಾರಗಳಿಗೆ ಆಸೆ ಪಡದೇ, ಸಾಮಾಜಿಕ ಚಿಂತನೆಗಳೊಂದಿಗೆ ಪ್ರಕೃತಿಯನ್ನು ಉಳಿಸುವ ಸೇವೆ ಗಳೊಂದಿಗೆ , ಸ್ತ್ರೀ ದೌರ್ಜನ್ಯದ ವಿರುದ್ಧ ಪ್ರಬಲ ಖಂಡನೆಗಳೊಂಡಿಗೆ ತನ್ನ ಸಂಪೂರ್ಣ ಬದುಕನ್ನೇ ಹಾಲಕ್ಕಿ ಬುಡಕಟ್ಟು ಸಮುದಾಯದ ಒಳಿತಿಗೆ ಮುಡಿಪಾಗಿಟ್ಟ ವಿಶಿಷ್ಟ ಮಹಿಳೆ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ .

ಪರಿಸರವಾದಿ, ಕಲಾವಿದ ದಿನೇಶ್ ಹೊಳ್ಳ ಜೊತೆ ಸುಕ್ರಿ ಬೊಮ್ಮಗೌಡ

ಶಾಲೆಯ ಮೆಟ್ಟಿಲನ್ನು ಏರದೇ ಓದಲು ಬರೆಯಲು ತಿಳಿಯದೇ ಇದ್ದರೂ ವಿಶ್ವ ವಿದ್ಯಾನಿಲಯದಲ್ಲಿ ಜಾನಪದ ಹಾಡುಗಳ ಬಗ್ಗೆ ಉಪನ್ಯಾಸಕಿ ಆದದ್ದು, ಪ್ರಶಸ್ತಿಗಳಿಂದ ದೂರ ಇದ್ದರೂ ದೇಶದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿದೆ ಎಂದರೆ ಇವರ ಸಾಧನೆಯನ್ನು ಗಮನಿಸಬಹುದು. ಓದು, ಬರಹ ಅರಿಯದ ಇವರು 4000 ಕ್ಕಿಂತ ಹೆಚ್ಚು ಜಾನಪದ ಹಾಡುಗಳನ್ನು ರಚಿಸಿ ಆದು ಎಲ್ಲೂ ಕೃತಿ ರೂಪದಲ್ಲಿ ಇರದೇ ಕೇವಲ ಇವರ ಮನದ ಹೊತ್ತಗೆಯಲ್ಲಿ ದಾಖಲಾಗಿದೆ ಎಂದರೆ ಅದೇನು ನೆನಪುಗಳ ಚೇತನಾ ಶಕ್ತಿ ಇವರದ್ದು ಅಂದರೆ ಅಚ್ಚರಿ ಅಲ್ಲದೆ ಇನ್ನೇನು..!?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಖೇಣಿ ಬಡಿಗೇರ ತಾಲೂಕಿನ ಸುಕ್ರಿ ಅಜ್ಜಿ ತನ್ನ ವಯಸ್ಸು 84 ದಾಟಿದರೂ ಜೀವನೋತ್ಸಾಹ , ಲವಲವಿಕೆ ಯುವಕ, ಯುವತಿಯರನ್ನು ನಾಚಿಸುವಂತೆ ಇದೆ. ಬಡಿಗೇರ ಸುತ್ತಮುತ್ತ ಮದ್ಯಪಾನದ ವಿರುದ್ಧ ಇವರು ಮಾಡಿರುವ ಚಳುವಳಿ ಹಿಂದೊಮ್ಮೆ ಇಡೀ ಸಮಾಜದಲ್ಲಿ ಒಂದು ಬದಲಾವಣೆಯ ಕ್ರಾಂತಿಯೇ ಆಗಿತ್ತು.

ಹಾಲು ಮತ್ತು ಅಕ್ಕಿ ಬೆಳೆಸುವುದು ಇವರ ಮೂಲ ಕಸುಬು ಆದುದರಿಂದ ಇವರಿಗೆ ಹಾಲಕ್ಕಿ ಸಮುದಾಯ ಎಂಬ ಹೆಸರಾಗಿದೆ. ಒಟ್ಟಾರೆ ಸುಕ್ರಿಅಜ್ಜಿ ಈ ನಾಡಿನ ಸೆಲೆಬ್ರಿಟಿ ಅಂತೂ ಕಟು ಸತ್ಯ. ಅಜ್ಜಿಯ ಹಾಡುಗಳು ಶಾಶ್ವತ ದಾಖಲೆ ಆಗಿ ಉಳಿಯಬೇಕು ಅದು ಭವಿಷ್ಯದ ಸಮಾಜದಲ್ಲಿ ಬೆಳಗಬೇಕು ಎಂಬುದು ನಮ್ಮೆಲ್ಲರ ಆಶಯ. ದಕ್ಷಿಣ ಕನ್ನಡ ಛಾಯಾಚಿತ್ರಕಾರ ಸಂಘ ಆಯೋಜಿಸುವ ‘ ವೃಕ್ಷ ಸುರಕ್ಷಾ ‘ ಕಾರ್ಯಕ್ರಮಕ್ಕೆ ಇವರು ಮಂಗಳೂರಿಗೆ ಬರಲಿದ್ದಾರೆ.

  • ದಿನೇಶ್ ಹೊಳ್ಳ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

11 hours ago