ಬಂಟ್ವಾಳ

ಶ್ರೀ ಕ್ಷೇ.ಧ. ಗ್ರಾ. ಯೋಜನೆ – ಸಿಡ್ ಬೀ ಸಮೃದ್ಧಿ ಪ್ರಗತಿನಿಧಿ ವಿತರಣೆ

ಶ್ರೀ ಕ್ಷೇ.ಧ. ಗ್ರಾ. ಯೋಜನೆ ಬಿ ಸಿ ಟ್ರಸ್ಟ್(ರಿ) ಬಂಟ್ವಾಳ, ಸಿದ್ಧಕಟ್ಟೆ ವಲಯ ಚೆನ್ನೈತೋಡಿ ಒಕ್ಕೂಟದ ಮೂವರು ಸದಸ್ಯರಿಗೆ  ಸಣ್ಣ ಕೈಗಾರಿಕೆ ಮತ್ತು ಸ್ವ ಉದ್ಯೋಗಕ್ಕಾಗಿ ಎಸ್ ಕೆ ಡೀ ಆರ್ ಡೀ ಪೀ ಮತ್ತು ಸಿಡ್ಬಿ ಸಮೃದ್ಧಿ ಯೋಜನೆ ಪ್ರಗತಿನಿಧಿ ಸಾಲವನ್ನು ಚೆನ್ನೈ ತೋಡಿಯಲ್ಲಿ ವಿತರಿಸಲಾಯಿತು.

ಜಾಹೀರಾತು

ಸಿದ್ಧಕಟ್ಟೆ ವಲಯ ಜನಜಾಗೃತಿ ಅಧ್ಯಕ್ಷ , ಉದ್ಯಮಿ ಶ್ರೀಧರ ಪೈ ಪ್ರಗತಿನಿಧಿ ಮೊತ್ತವನ್ನು ವಿತರಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್ ಗಳೊಂದಿಗೆ ಕೈಜೋಡಿಸಿ ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ, ಡಾ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಇಂತಹ ಇನ್ನಷ್ಟು ಜನಸ್ನೇಹಿ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.

ಒಕ್ಕೂಟ ಅಧ್ಯಕ್ಷ ಪ್ರಕಾಶ್ ಪೂಜಾರಿ, ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಫಲಾನುಭವಿಗಳಿಗೆ ಶುಭ ಹಾರೈಸಿದರು. ಗ್ರಾ. ಪಂ ಸದಸ್ಯ ಜಯಾನಂದ ಕುಲಾಲ್, ಸ್ಥಳೀಯ ಉದ್ಯಮಿ ಪ್ರವೀಣ್ ಗಟ್ಟಿ, ಹಾಲು ಒಕ್ಕೂಟದ ಯಶೋಧರ ಸ ಪಲ್ಯ, ಸೇವಾ ಪ್ರತಿನಿಧಿ ತಾರಾನಾಥ ಶೆಟ್ಟಿ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಇದ್ದರು.

ಬಂಟ್ವಾಳನ್ಯೂಸ್ , ಸಂಪಾದಕ: ಹರೀಶ ಮಾಂಬಾಡಿ. ಜಾಹೀರಾತು ನೀಡಲು ಸಂಪರ್ಕಿಸಿ: 9448548127

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.