ಬಂಟ್ವಾಳ

ಸೇವೆ ಎಂದು ಭಾವಿಸಿ ಕೆಲಸ ಮಾಡಿ: ಆಳ್ವ

ಸರಕಾರಿ ಉದ್ಯೋಗವಾಗಿದ್ದರೂ ಸೇವೆ ಎಂಬಂತೆ ಭಾವಿಸಿ ಕೆಲಸ ಮಾಡುವುದರಿಂದಾಗಿ ಸಂಸ್ಥೆ ಹಾಗೂ ಸಮಾಜದಲ್ಲಿ ಗುರುತಿಸುವಂತಾಗಿದೆ . ನಮಗೆ ಅನ್ನ ನೀಡಿದ ಸಂಸ್ಥೆ ಗೆ ಯಾವತ್ತೂ  ಋಣಿ ಯಾಗಿರಬೇಕು ಎಂದು  ಬಿ ಎಸ್ ಎನ್ ಎಲ್ ನ ಬಂಟ್ವಾಳ ಮಾರ್ಕೆಟಿಂಗ್ ರಿಟೈಲ್ ಮೆನೇಜರ್ ರಾಗಿರುವ ಕಂಪ ಸದಾನಂದ ಆಳ್ವ ರವರು ವಿದಾಯ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು .

ಜಾಹೀರಾತು

ನಿರಂತರ ೩೭ ವರ್ಷ ಗಳ ಸುದೀರ್ಘ ಸೇವೆ ಯಿಂದ ನಿವೃತ್ತರಾದ ಆಳ್ವ ರವರು ಗೋಣಿಕೊಪ್ಪಲು , ಮೂಡಬಿದ್ರೆ , ಬಂಟ್ವಾಳ ತಾಲೂಕುಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ , ಈ ಸಂದರ್ಭ ದಲ್ಲಿ ಕಮಲಾಕ್ಷಿ ಮಯ್ಯ , ಭಾರತಿ ಶೆಣೈ , ಹಾಗು ಪುರುಷೋತ್ತಮ ನಾಯಕ್ ರವರು ಕೂಡ ನಿವೃತ್ತರಾಗಿದ್ದು ಅವರನ್ನು  ಬಂಟ್ವಾಳ ಟೆಲಿಕಾಂ ರಿಕ್ರಿಯೇಷನ್ ಕ್ಲಬ್ ವತಿಯಿಂದ ಬಂಟ್ವಾಳ ಲಯನ್ಸ್ ಕ್ಲಬ್ ನಲ್ಲಿ  ನಡೆದ ವಿದಾಯ ಕೂಟ ಸಮಾರಂಭ ದ ವೇದಿಕೆಯಲ್ಲಿ   ಬಿ ಎಸ್ ಎನ್ ಎಲ್ ನ  ಡೆಪ್ಯುಟಿ ಜನರಲ್ ಮ್ಯಾನೇಜರ್ ಗಳಾದ   ವಿಷ್ಣು ಮೂರ್ತಿ ಭಟ್ , ಹಾಗೂ ವಿಜಯಲಕ್ಷ್ಮಿ ಆಚಾರ್ , ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗಳಾದ ಲೋಕೇಶ್ , ಅರುಣ್ ಮಾನ್ವಿ , ಆನಂದ ನಿವೃತ್ತ ಅಧಿಕಾರಿಗಳಾದ ವಿಠ್ಠಲ್ ಭಂಡಾರಿ , ಕೃಷ್ಣ ಶ್ಯಾಮ್ , ಬಿ ವಿ ಉಪಾಧ್ಯ , ರೋಟರಿ ನಿಯೋಜಿತ ಅಸಿಸ್ಟೆಂಟ್ ಗವರ್ನರ್  ಪ್ರಕಾಶ್ ಕಾರಂತ್ , ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ಬಂಟ್ವಾಳ ಬಂಟರ ಸಂಘ ದ ಉಪಾಧ್ಯಕ್ಷ  ಕಿರಣ್ ಹೆಗ್ಡೆ , ಬಂಟ್ವಾಳ ಜನ ಜಾಗ್ರತಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ , ಮಹೇಶ್ ಟ್ರಾವೆಲ್ಸ್ ಮಾಲಕರಾದ ಜಯರಾಮ್ ಶೇಕ , ಪುದು ಜಿಲ್ಲಾ ಪಂಚಾಯತ್ ಸದಸ್ಯ  ರವೀಂದ್ರ ಕಂಬಳಿ , ಬಂಟರ ಸಂಘ ಫರಂಗಿಪೇಟೆ ವಲಯ ಅಧ್ಯಕ್ಷ  ಶಶಿರಾಜ್ ಶೆಟ್ಟಿ ಕೊಳಂಬೆ , ಎಂ ಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ , ಪತ್ರಕರ್ತ ರಾಜ ಬಂಟ್ವಾಳ , ರಂಗೋಲಿ ಸದಾನಂದ ಶೆಟ್ಟಿ , ಉದ್ಯಮಿ ಜನಾರ್ಧನ ಅರ್ಕುಳ , ಇರಾ ಬಂಟರ ಸಂಘ ದ ಅಧ್ಯಕ್ಷ ಚಂದ್ರಹಾಸ್ ರಾಯ್ ಬಾಲಾಜಿಬೈಲ್  ಮತ್ತಿತರರು ಉಪಸ್ಥಿತರಿದ್ದರು

www.bantwalnews.com Editor: Harish Mambady

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.